ಬೆಂಬಲ ಬೆಲೆ ಘೋಷಣೆ, ರೈತರುಸದುಪಯೋಗಪಡಿಸಿಕೊಳ್ಳಿ ; ಎಪಿಎಂಸಿ ಅಧ್ಯಕ್ಷ ಉಮೇಶ್ ಪೂಜಾರ

0
254

ಕೊಟ್ಟೂರು:ಜ:29:- ಸರ್ಕಾರದ ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದೊಂದಿಗೆ ಕೊಟ್ಟೂರಿನ ಎಪಿಎಂಸಿ ಪ್ರಾಂಗಣದಲ್ಲಿ ಭಾನುವಾರದಂದು ರಾಗಿ ಖರೀದಿ ಕೇಂದ್ರವನ್ನು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್ ಭೀಮನಾಯ್ಕ್ ಉದ್ಘಾಟಿಸಿದರು.

ನಂತರ ಎಪಿಎಂಸಿ ಅಧ್ಯಕ್ಷರಾದ ಉಮೇಶ್ ಪೂಜಾರ ಮಾತನಾಡಿ ಸರ್ಕಾರದ ಆದೇಶದಂತೆ ಕಳೆದ ತಿಂಗಳು ರೈತರಿಂದ ನೇರವಾಗಿ ಖರೀದಿಸುವ ಈ ಯೋಜನೆಗೆ ಡಿಸೆಂಬರ್ ನಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿತ್ತು ಅದರಂತೆ ಸುಮಾರು 2963 ರೈತರು 53352 ಕ್ವಿಂಟಲ್ ರಾಗಿಯನ್ನು ನೋಂದಾಯಿಸಿದ್ದಾರೆ ಸರ್ಕಾರವು 3578 ರೂಪಾಯಿಗಳನ್ನು ಬೆಂಬಲ ಬೆಲೆಯನ್ನು ಘೋಷಿಸಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಎಲ್ಲಾ ನೋಡಲ್ ಅಧಿಕಾರಿಗಳಾದ ಜಿಕೆ ವೆಂಕಟೇಶ್,ಎಪಿಎಂಸಿ ಕಾರ್ಯದರ್ಶಿಗಳಾದ ಎ.ಕೆ ವೀರಣ್ಣ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದ್ವಾರಕೀಶ್, ಮುಖಂಡರಾದ ಅಡಿಕೆ ಮಂಜುನಾಥ್ ವ್ಯವಸ್ಥಾಪಕರಾದ ಸಂಗಮೇಶ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here