ವನಸಿರಿ ಫೌಂಡೇಶನ್ ವತಿಯಿಂದ ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮ ಮಹಾತ್ಮ ಗಾಂಧಿ ಸರ್ಕಲ್ ಸಿಂಧನೂರ್ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಪರಿಸರ ನಾಶವಾಗುದರಿಂದ ಇಂದು ಪರಿಸರದ ಕಡೆಗೆ ಎಲ್ಲರೂ ಹೆಜ್ಜೆ ಇಡಲೆಂದು ಈ ಒಂದು ಜಾಗೃತಿ ಕಾರ್ಯಕ್ರಮ ಮಾಡಲಾಯಿತು ಎಂದು ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಹೇಳಿದರು.
ವನಸಿರಿ ಫೌಂಡೇಶನ್ ಕಾರ್ಯಕ್ಕೆ ಪ್ರಾದೇಶಿಕ ಅರಣ್ಯ ವಲಯ ಸಾಮಾಜಿಕ ಅರಣ್ಯ ವಲಯ, ದೃಶ್ಯ ದೀಪ ಕಲಾ ಸೇವಾ ಸೇವಾ ಟ್ರಸ್ಟ್ ಸಿಂಧನೂರು ಜೊತೆಗೆ ಕೈಜೋಡಿಸಿದ್ದಾರೆ. ಈ ಸಂದರ್ಭದಲ್ಲಿ ಪರಮಪೂಜ್ಯ ಸೋಮನಾಥ ಶಿವಾಚಾರ್ಯರು, ಮುಖಂಡರಾದ ಕೆ,ಕರಿಯಪ್ಪ, ನಗರಸಭೆ ಪೌರಾಯುಕ್ತ ಎಂ ವಿರುಪಾಕ್ಷ ಮೂರ್ತಿ, ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಬಸನಗೌಡ ತುರ್ವಿಹಾಳ್ ಶಾಸಕರು ಮಸ್ಕಿ ಮತಕ್ಷೇತ್ರ, ಯುವ ಮುಖಂಡ ಬಸನಗೌಡ ಬಾದರ್ಲಿ,ಸಿದ್ದು ಹೂಗಾರ್, ರಮೇಶ್ ಕುನ್ನಟಿಗಿ, ಮಂಜುನಾಥ್ ಗಾಣಿಗೇರ, ಪ್ರದೀಪ್ ಪೂಜಾರಿ,ರಾಜು ಬಳಗಾನೂರ, ವೀರಬಾಬು, ಉಮೇಶ್ ಪತ್ತಾರ, ನಾಗರಾಜ್, ಮನೋಹರ್ ಪತ್ತಾರ್, ರಮೇಶ್ ಮಾನ್ವಿ, ಅಮೃತ ಬದಿ, ಯಶವಂತ, ನಾಗರಾಜ್ ಖಂಡಿಮಠ,ಚಂದ್ರು ಮಲ್ಲಾಪುರ ವನಸಿರಿ ಫೌಂಡೇಶನ್ ಸರ್ವ ಸದಸ್ಯರು ಮತ್ತು ದೃಶ್ಯ ಕಲಾವಿದ ಸರ್ವ ಸದಸ್ಯರು ಮತ್ತು ಪೊಲೀಸ್ ಇಲಾಖೆ ಯವರು ಭಾಗಿಯಾಗಿದ್ದರು