ಇಂದು ಬಳ್ಳಾರಿಯಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಒಕ್ಕೂಟ ವತಿಯಿಂದ ಸರ್ಕಾರದ ಕೋವಿಡ್ ನಿರ್ವಹಣೆಯಲ್ಲಿ ಅಗಿರುವ ಲೋಪದೋಷಗಳನ್ನು ಖಂಡಿಸಿ ಹಾಗೂ ವಿದ್ಯುತ್, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ SUCI(C) ಜಿಲ್ಲಾ ಕಾರ್ಯದರ್ಶಿ ಕಾ.ರಾಧಾಕೃಷ್ಣ ಉಪಾದ್ಯ, CPI(M), ರಾಜ್ಯ ಕಾರ್ಯದರ್ಶಿ ಕಾ. ಯು.ಬಸವರಾಜ, ಸೋಮಶೇಖರ್ ಗೌಡ, ಎ.ದೇವದಾಸ್, ಪಾಂಡು ಮತ್ತಿತರರು ಭಾಗವಹಿಸಿದ್ದರು.
ವರದಿ:-ಮಹೇಶ್