ಸಿಂಧನೂರು ನಗರದ ರೇಣುಕಾ ಅಪಾರ್ಟ್ಮೆಂಟ್ ಹತ್ತಿರ ಸುಭಾಷ್ ರೆಡ್ಡಿ ಗುತ್ತೇದಾರ್ ಅವರಿಂದ ನಗರದ ಕೆ.ಎಸ್.ಆರ್.ಟಿ.ಸಿ ಹಾಮಾಲರ ಕುಟುಂಬಕ್ಕೆ ಮತ್ತು ವೆಂಕಟೇಶ್ವರ ಕಾಲೋನಿಯ ಕಾಲುವೆ ಮೇಲೆ ಇರುವ ಬಡ ಕುಟುಂಬದ ಕೂಲಿ ಕಾರ್ಮಿಕರಿಗೆ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನೆಕ್ಕಂಟಿ ಸುರೇಶ್ (ಶ್ರೀ ವೆಂಕಟೇಶ್ವರ ಆಗ್ರೋ ಸರ್ವಿಸ್ ವ್ಯವಸ್ಥಾಪಕರು), ಎಸ್.ಜಿ ಪಾಟಿಲ್ (ಶಿಕ್ಷಕರು), ಯುವ ಮುಖಂಡ ದಾಸರಿ ಅಜಯ್, ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ್ ದೇಶಪಾಂಡೆ, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಕಾರ್ಯದರ್ಶಿ ಅಶೋಕ ನಲ್ಲಾ, ಸ್ವಾಮಿ ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ಪಿ. ಶ್ರೀನಿವಾಸ, ಸದಸ್ಯ ಸಿ.ವಿ.ಗೌಡ, ರಮೇಶ್ ಜಿಜೆ ಇನ್ನಿತರ ಉಪಸ್ಥಿತರಿದ್ದರು.
ವರದಿ: ಅವಿನಾಶ ದೇಶಪಾಂಡೆ