ಬಿಜೆಪಿ ಸರ್ಕಾರ ಮಾಡಬೇಕಾದ ಕೆಲಸ ನಮ್ಮ ಪಕ್ಷದ ಶಾಸಕರು ಮಾಡುತ್ತಿದ್ದಾರೆ,ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

0
324

ಸಂಡೂರು ಪಟ್ಟಣದಲ್ಲಿ ಇಂದು ಉಚಿತವಾಗಿ ತಾಲೂಕಿನ ಸಾರ್ವಜನಿಕರಿಗೆ 45 ಸಾವಿರ ಆಹಾರ ಕಿಟ್ ಗಳ ವಿತರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಿಟ್ ವಿತರಣೆಯ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತಾನಾಡುತ್ತ.
ಕರೋನಾದಿಂದ ಕಂಗೆಟ್ಟು ಹೋಗಿರುವ ಜನಗಳಿಗೆ ಒಂದೊತ್ತಿನ ಊಟ ನೀಡಲು ಯೋಗ್ಯತೆ ಇಲ್ಲದ ಸರ್ಕಾರ ಬದುಕಲು ದಿನಸಿ ಪದಾರ್ಥಗಳನ್ನು ಕೊಡದೆ ದಿನನಿತ್ಯ ಕುರ್ಚಿಯನ್ನು ಉಳಿಸಿಕೊಳ್ಳಲು ಬಡಿದಾಡುತ್ತಿದ್ದಾರೆ

ಸಂಡೂರು ಶಾಸಕರಾದ ತುಕಾರಾಂ ಇಂದು ಕ್ಷೇತ್ರದ ಜನತೆಗೆ ತನ್ನ ಸ್ವಂತ ಖರ್ಚಿನಲ್ಲಿ 45 ಸಾವಿರ ಜನರಿಗೆ ಆಹಾರ ಕಿಟ್ ಗಳನ್ನು ಮುಂದಾಗಿದ್ದಾರೆ. ಹಾಗೆ ಮತ್ತೊಬ್ಬ ಮಾಜಿ ಮಂತ್ರಿಗಳಾದ ಸಂತೋಷ್ ಲಾಡ್ ಅವರು ಸಹ ತಮ್ಮ ಕಲಘಟಗಿ ಕ್ಷೇತ್ರದಲ್ಲಿ 60 ಸಾವಿರ ಜನರಿಗೆ ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ.

ಈ ಕೆಲಸಗಳನ್ನು ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಹಾಗೂ ಯಡಿಯೂರಪ್ಪ ಮಾಡಬೇಕಿತ್ತು ಆದರೆ ಅವರಿಗೆ ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಇಂತಹ ಸರ್ಕಾರವನ್ನು ಎಷ್ಟು ಬೇಗ ಕಿತ್ತು ಹೊಗೆಯುತ್ತಿರೋ ಅಷ್ಟು ಬೇಗ ನಿಮಗೆ ಒಳ್ಳೆಯದು ಎಂದು ಸಾವಿರಾರು ಜನರು ಬಾಗವಹಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು

ಈ ಸಂಧರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಅಂಗವಿಕಲರಿಗೆ, ಅಲೆಮಾರಿ ಜನಾಂಗದವರಿಗೆ.ಮಂಗಳಮುಖಿಯರಿಗೆ ಆಹಾರ ಕಿಟ್ ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಂತೋಷ್ ಲಾಡ್, ತುಕಾರಾಂ, ಮಾಜಿ ಸಂಸದ ಉಗ್ರಪ್ಪ,
ಬೈರತಿ ಬಸವರಾಜ್, ಅಶೋಕ್ ಪಟ್ಟಣಶೆಟ್ಟಿ, ಶಾಸಕ ಬಿ. ನಾಗೇಂದ್ರ, ಪ್ರಕಾಶ್ ರಾಠೋಡ್,
ಸಂಡೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಅನಿತಾ ವಸಂತ್ ಕುಮಾರ್ ಮತ್ತು ಜಿಲ್ಲಾ ಹಾಗೂ ತಾಲೂಕು ಕಾಂಗ್ರೇಸ್ ಮುಖಂಡರುಗಳು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸದಸ್ಯರು ಪಕ್ಷದ ಮುಖಂಡರು ಕಾರ್ಯಕರ್ತರು ಬಾಗವಹಿಸಿದ್ದರು.

LEAVE A REPLY

Please enter your comment!
Please enter your name here