ಕುಡುತಿನಿ ಪಟ್ಟಣದ ರಸ್ತೆ ಪಕ್ಕದಲ್ಲಿ ದೋಭಿ ಘಾಟ್ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಸೂಚನೆ

0
174

ಸಂಡೂರು ತಾಲೂಕಿನ ಕುಡುತಿನಿ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಪಕ್ಕದಲ್ಲಿ ಇರುವ ಸರ್ವೆ ನಂಬರ್ 863 ರಲ್ಲಿ 4 ಎಕರೆ 9 ಸೆಂಟ್ಸ್ ಮಡಿವಾಳರ ದೋಭಿ ಘಾಟ್ ಮೇಲೆ ಅಡ್ಡರಸ್ತೆಯ ಕಾಮಗಾರಿ ನಡೆಯುತ್ತಿದ್ದು ಇದರಿಂದ ಮಡಿವಾಳರ ಜನಾಂಗದವರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಡಿವಾಳ ಮಾಚಿದೇವ ಸಂಘದ ವತಿಯಿಂದ ಮನವಿ ಸಲ್ಲಿಸಿದ್ದರು

ಈ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಡ್ಡ ರಸ್ತೆಯ ಪಕ್ಕದಲ್ಲಿ ಮಡಿವಾಳ ಕುಟುಂಬದವರಿಗೆ ದೋಭಿ ಘಾಟ್ ನಿರ್ಮಾಣ ಮಾಡುವಂತೆ ಕಂದಾಯ ನಿರೀಕ್ಷಕರಾದ ವೀರೇಶ್ ಇವರಿಗೆ ತಿಳಿಸಿದರು
ನಿಂತಿರುವ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ನಡೆಸುವಂತೆ ತಿಳಿಸಿದರು

ಈ ಸಂಧರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಿ. ರಾಜಶೇಖರ, ಗ್ರಾಮ ಲೆಕ್ಕಾಧಿಕಾರಿ ವಿರಭದ್ರಯ್ಯ, ಸದಸ್ಯರಾದ ವೆಂಕಟರಮಣಬಾಬು,ಸುನಿಲ್, ಲೆನಿನ್, ಪಂಪ, ಹಾಲಪ್ಪ, ನಿವೃತ್ತ ಯೋದರಾದ ಬಸವರಾಜ ಸ್ವಾಮಿ, ವಕೀಲ ಪ್ರಕಾಶ್ ನಾಗಲಿಂಗ ಆಚಾರ್, ಬಿಮೇಶ, ರಾಜಪ್ಪ ಇದ್ದರು

LEAVE A REPLY

Please enter your comment!
Please enter your name here