ಕಂದಾಯ ದಿನಾಚರಣೆ ಪ್ರಯುಕ್ತ ಗ್ರಾಮ ಸಹಾಯಕರಿಗೆ ಪುಡ್ ಕಿಟ್ ವಿತರಣೆಗೆ ಜಿಲ್ಲಾಧಿಕಾರಿ ಚಾಲನೆ.

0
126

ಯಾದಗಿರಿ: ಜುಲೈ, 02, ಕಂದಾಯ ದಿನಾಚರಣೆ ಪ್ರಯುಕ್ತ ತಹಶೀಲ್ದಾರ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸಸಿ ನೆಟ್ಟು ನೇರೆರೆದರು.

ಈ ವೇಳೆ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳಾದ ಗ್ರಾಮ ಸಹಾಯಕರಿಗೆ ಆಹಾರ ಧಾನ್ಯದ ಕಿಟ್ ಗಳ ವಿತರಣೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದರು.

ಜಿಲ್ಲೆಯ 6 ತಾಲೂಕುಗಳ ಪೈಕಿ, ಭೂಮಿ ತಂಡಕ್ಕೆ ಅತ್ಯುತ್ತಮ ಹಾಗೂ ಅಸಾಧಾರಣ ನಾಯಕತ್ವವನ್ನು ನೀಡಿ ಮಾರ್ಚ್ – 2021 ರ ಮಾಹೆಯಲ್ಲಿ ಯಾದಗಿರಿ ತಾಲೂಕು ಪ್ರಥಮ ಶ್ರೇಯಾಂಕವನ್ನು ಪಡೆದಿರುವುದಕ್ಕೆ ತಹಶೀಲ್ದಾರರ ಕಾರ್ಯಕ್ಕೆ ಜಿಲ್ಲಾಧಿಕಾರಿ ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here