ಹಾಯ್ ಸಂಡೂರ್, ನ್ಯೂಸ್
ಕೂಡ್ಲಿಗಿ.ಜು. 11:- ಇಸ್ಪೀಟ್ ಅಡ್ಡೆ ಮೇಲೆ ಕೂಡ್ಲಿಗಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 13ಜನರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ಸರಹದ್ದಿನ ಸಂಡೂರು ತಾಲೂಕು ಚಿಕ್ಕಕೆರೆಯಾಗಿನಹಳ್ಳಿಲಿ ಜರುಗಿದೆ.
ಗುರುವಾರ ಸಂಜೆ ಚಿಕ್ಕಕೆರೆಯಾಗಿನಹಳ್ಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಕೂಡ್ಲಿಗಿ ಪಿಎಸ್ಐ
ಡಿ.ಪಿ. ಶರತಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ 13 ಜನರಲ್ಲಿ 11ಮಂದಿ ತಪ್ಪಿಸಿಕೊಂಡು ಪರಾರಿಯಾಗಿದ್ದು ಇಬ್ಬರು ಮಾತ್ರ ಸಿಕ್ಕಿದ್ದು ಅವರ ಬಳಿ ಇದ್ದ 1700ರೂ ಹಣ ಜಪ್ತಿ ಮಾಡಿಕೊಂಡಿದ್ದಾರೆ
ನ್ಯಾಯಾಲಯದ ಪರವಾನಿಗೆ ಪಡೆದು ಶುಕ್ರವಾರ ರಾತ್ರಿ ಸರ್ಕಾರದ ಪರವಾಗಿ ಕೂಡ್ಲಿಗಿ ಪಿಎಸ್ಐ ಶರತ್ ಕುಮಾರ್ ನೀಡಿದ ದೂರಿನಂತೆ 13ಜನರ ವಿರುದ್ಧ ಕೂಡ್ಲಿಗಿ ಠಾಣಾ ಮುಖ್ಯಪೇದೆ ಲೋಕೇಶ ಪ್ರಕರಣ ದಾಖಲಿಸಿಕೊಂಡಿದ್ದಾರೆ