ಬಳ್ಳಾರಿ : ನಗರದ 23ನೇ ವಾರ್ಡ್ ಮಹಾನಂದಿ ಕೊಟ್ಟಂ ಅಂಬೇಡ್ಕರ್ ಯುವಕರ ಸಂಘದ ಕಛೇರಿಯಲ್ಲಿ ಇಂದು ಬಾಬಾ ಸಹೇಬ ಅಂಬೇಡ್ಕರ್ ವಿಶ್ವಕಂಡ ತ್ಯಾಗಮಯಿ ಮಹಾಮತೆ ರಮಾಬಾಯಿ ಅಂಬೇಡ್ಕರ್ ರವರ 125ನೇ ಜಯಂತಿಯನ್ನು ಭಾವಚಿತ್ರಕ್ಕೆ ಪುಷ್ಪ ಹಾಕುವುದರ ಮೂಲಕ ಆಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ಕೆ.ಮಲ್ಲಿನಾಥ್ ರವರು ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದ ಭೀಮನನ್ನು, ಬಾಬಾ ಸಾಹೇಬ್ ಡಾ|| ಭೀಮರಾವ್ ಅಂಬೇಡ್ಕರ್ ಮಾಡಿದ ಶ್ರೇಯಸ್ಸು ಮತ್ತು ಕೀರ್ತಿ ಮಾತೆ ರಮಾಬಾಯಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು. ಹಾಗೂ ಇದೇ ಸಂದರ್ಭದಲ್ಲಿ ಸಂಘದ ಗೌರವಧ್ಯಾಕ್ಷರಾದ ಕೆ.ಬಾಬು , ಅಧ್ಯಕ್ಷರಾದ , ಕೆ.ಮಲ್ಲಿನಾಥ್ , ಉಪಾಧ್ಯಕ್ಷರುಗಳಾದ ,ಡಿ. ಶೇಕ್ಷವಲಿ.ಗೋಪಾಲ್ , ಓಂಕಾರಿ , ಮಂಜುನಾಥ್ , ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ.ಎಸ್ ಭಂಡಾರಿ , ಸಂಘಟನೆ ಕಾರ್ಯದರ್ಶಿಯಾದ ಕೆ.ಇ.ಈರೇಶ್, ಸಹ ಸಂಘಟನೆ ಕರ್ಯದರ್ಶಿಗಳಾದ ಕೆ.ವೈ.ಯುವರಾಜ್ , ಪರಶುರಾಮ್ , ಖಜಾಂಚಿಗಳಾದ ರಾಮಾಂಜಿನಿ ಸದಸ್ಯರುಗಳಾದ , ಎಸ್.ಎಮ್.ಹುಲುಗಪ್ಪ , ಆನಂದ , ಸುಂಕಣ್ಣ , ಪ್ರದೀಪ್ , ಲೇಕೇಶ್ .ಹೆಚ್ , ಹಾಗೂ ಇನ್ನೂ ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರೆಂದು ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮಣ. ಎಸ್ ಭಂಡಾರಿ ಯವರು ಪತ್ರಿಕೆ ಪ್ರಕಟಣೆ ತಿಳಿಸಿದರು.