ಬಳ್ಳಾರಿ : ಕುಡತಿನಿ ನಾಲ್ಕನೇ ವಾರ್ಡ್ ಶಂಕ್ರಪ್ಪ ಗುಡಿ ಹತ್ತಿರ ನೂತನವಾಗಿ ಶಿಶುಪಾಲನಾ ಕೇಂದ್ರ ಆರಂಭವಾಗಿದೆ ಕಾರ್ಮಿಕರ ಇಲಾಖೆ ಬಳ್ಳಾರಿ ಕರ್ನಾಟಕ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು ಇವರ ಆಶ್ರಯದಲ್ಲಿ ಬಳ್ಳಾರಿ ಜಿಲ್ಲೆ ಕುಡಿತಿನಿ ವಿಲೇಜ್ ನೊಂದಾಯಿತ ಕಟ್ಟಡ ಕಾರ್ಮಿಕರ ಫಲಾನುಭವಿ ಮಕ್ಕಳಿಗಾಗಿ ಹೊಸದಾಗಿ ಕುಡತಿನಿಯಲ್ಲಿ ಶಿಶುಪಾಲನಾ ಕೇಂದ್ರ ತೆರೆಯಲಾಗಿದ್ದು ಶನಿವಾರ ಶಿಶುಪಾಲನ ಕೇಂದ್ರದಲ್ಲಿ ಶಿಶುಪಾಲನಾ ಕೇಂದ್ರದ ವ್ಯವಸ್ಥಾಪಕರ ಕೋರಿಕೆ ಮೇರೆಗೆ ST. ಮೇರಿ ಹಾಸ್ಪಿಟಲ್ ಕಡೆಯಿಂದ ಆರೋಗ್ಯ ತಪಾಸಣೆ ನಡೆಯಿತು
ಒಟ್ಟು 32. ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಡಾಕ್ಟರ್ ಕ್ಯಾಟ್ರಿನ್ ಹೇಳಿದರು ಕೆಲವು ಮಕ್ಕಳಿಗೆ ಕೆಮ್ಮು ನೆಗಡಿ ಆಗಿದೆ ಸಿರಾಪ್ ನೀಡಲಾಗಿದೆ
ಹಾಗೆ ಕುಡಿತಿನಿ ಚರ್ಚ್ ಫಾದರ್ ಜಯಪ್ರಕಾಶ್ ಮತ್ತು ಫಾದರ್ ಚಿನ್ನಪ್ಪ ಮಾತನಾಡಿ ಇಂದು ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ಮಾಡಿರುವ ಶಿಶುಪಾಲನಾ ಕೇಂದ್ರ ಎಲ್ಲಾತರದ ಕಟ್ಟಡ ಕಾರ್ಮಿಕರಿಗೆ ಉಪಯೋಗವಾಗಿದೆ ಎಂದು ಹೇಳಿದರು.