-ಬಸಯ್ಯ ಗೆಣಕಿಹಾಳು ಮಠ
ಬಳ್ಳಾರಿ:14ಮಾ:-ಕುರುಗೋಡು ಸಮೀಪದ ಹಳೇಕೋಟೆ ಗ್ರಾಮದಲ್ಲಿ ಮಧ್ಯರಾತ್ರಿ ನಡೆದ ಬೆಂಕಿ ಅವಘಡದ ಘಟನೆ ತಿಳಿದ ಯುವ ಬಿಜೆಪಿ ಮುಖಂಡ ಸಣ್ಣಸಿದ್ದಪ್ಪ ಬೇಟಿ ನೀಡಿ. ರೈತರಾದ ವಡ್ಡರು ಅಂಜಿನಪ್ಪ ಅವರಿಗೆ ಸೇರಿದ ಬಣವೆ ಹಾಗೂ ಎತ್ತುಗಳಿಗೆ ಆಕಸ್ಮಿಕ ಬೆಂಕಿ ತಗುಲಿ ಗಾಯಗೊಂಡಿದ್ದು
ಸೋಮವಾರ ಧಿಡಿರನೇ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶುವೈದ್ಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಸ್ಥಳದಲ್ಲಿ ಹಾನಿಗೊಳಗಾದ ರೈತನಿಗೆ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿ ಸೂಕ್ತ ಪರಿಹಾರ ಕಲ್ಪಿಸಿ ಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಯಿತು.
ತಂದೆಯವರ ಮುಖಾಂತರ ಪಶುಸಂಗೋಪಾನೆ ಇಲಾಖೆಯಲ್ಲಿ ಲೋನ್ ಮಾಡಿಕೊಡುವುದಾಗಿ ರೈತನಿಗೆ ಭರವಸೆ ನೀಡಿದರು ಈ ವೇಳೆ ಶಂಕರಪ್ಪ , ವೆಂಕಟೇಶ, ವೀರೇಶ ಮುಂತಾದವರು ಇದ್ದರು