ನೆಕ್ಕಂಟಿ ಸುರೇಶ್ ಬಳಗದಿಂದ ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸುವ ಕಾರ್ಯ

0
125

ಸಿಂಧನೂರು ನಗರದ ವೆಂಕಟೇಶ್ವರ ನಗರ ಹಾಗೂ ತಾಲೂಕಿನಾದ್ಯಂತ ವಿವಿಧೆಡೆ ವೆಂಕಟೇಶ್ವರ ಆಗ್ರೋಸ್ ಮಾಲೀಕ ನೆಕ್ಕಂಟಿ ಸುರೇಶ್ ಅವರ ನೇತೃತ್ವದಲ್ಲಿ ಹಸಿರು ಬಳಗದ ಪರಿಸರಪ್ರೇಮಿಗಳು ಕಳೆದ ಆರು ತಿಂಗಳ ಹಿಂದೆ ಹಚ್ಚಿದ ಗಿಡಗಳಿಗೆ ಗೊಬ್ಬರ, ನೀರು ಹಾಕಿ ಅವುಗಳ ಪೋಷಣೆ ಕಾರ್ಯ ಮಾಡಲಾಯಿತು.

ಈ ಬೇಸಿಗೆಯಲ್ಲಿ ಗಿಡಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ಕಳೆದ 15ದಿನಗಳಿಂದ ಈ ಕಾರ್ಯ ಮಾಡಲಾಗುತ್ತಿದೆ, ಸಾರ್ವಜನಿಕ ನಿಮ್ಮ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡುವ ಮೂಲಕ ಹಸಿರು ಸಿಂಧನೂರು ಮಾಡಲು ಕೈಜೋಡಿಸುವಂತೆ ಮನವಿ ಮಾಡಲಾಗಿದೆ

ಈ ಸಂದರ್ಭದಲ್ಲಿ ಸೂರ್ಯ ಎಜನ್ಸಿ ಮಾಲೀಕರಾದ ಬಾಲಕೃಷ್ಣ, ಸಮಾಜಸೇವಕ ಚನ್ನವೀರನಗೌಡ ಸೇರಿದಂತೆ ಹಲವರಿದ್ದರು

LEAVE A REPLY

Please enter your comment!
Please enter your name here