ಸಿಂಧನೂರು ನಗರದ ವೆಂಕಟೇಶ್ವರ ನಗರ ಹಾಗೂ ತಾಲೂಕಿನಾದ್ಯಂತ ವಿವಿಧೆಡೆ ವೆಂಕಟೇಶ್ವರ ಆಗ್ರೋಸ್ ಮಾಲೀಕ ನೆಕ್ಕಂಟಿ ಸುರೇಶ್ ಅವರ ನೇತೃತ್ವದಲ್ಲಿ ಹಸಿರು ಬಳಗದ ಪರಿಸರಪ್ರೇಮಿಗಳು ಕಳೆದ ಆರು ತಿಂಗಳ ಹಿಂದೆ ಹಚ್ಚಿದ ಗಿಡಗಳಿಗೆ ಗೊಬ್ಬರ, ನೀರು ಹಾಕಿ ಅವುಗಳ ಪೋಷಣೆ ಕಾರ್ಯ ಮಾಡಲಾಯಿತು.
ಈ ಬೇಸಿಗೆಯಲ್ಲಿ ಗಿಡಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ಕಳೆದ 15ದಿನಗಳಿಂದ ಈ ಕಾರ್ಯ ಮಾಡಲಾಗುತ್ತಿದೆ, ಸಾರ್ವಜನಿಕ ನಿಮ್ಮ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳಿಗೆ ನೀರುಣಿಸುವ ಕಾರ್ಯ ಮಾಡುವ ಮೂಲಕ ಹಸಿರು ಸಿಂಧನೂರು ಮಾಡಲು ಕೈಜೋಡಿಸುವಂತೆ ಮನವಿ ಮಾಡಲಾಗಿದೆ
ಈ ಸಂದರ್ಭದಲ್ಲಿ ಸೂರ್ಯ ಎಜನ್ಸಿ ಮಾಲೀಕರಾದ ಬಾಲಕೃಷ್ಣ, ಸಮಾಜಸೇವಕ ಚನ್ನವೀರನಗೌಡ ಸೇರಿದಂತೆ ಹಲವರಿದ್ದರು