◆ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ
ಸಂಡೂರು:ಪಟ್ಟಣದಲ್ಲಿ ಬಹು ವರ್ಷಗಳ ಬೇಡಿಕೆಯಾದ ಅಂಬೇಡ್ಕರ್ ಸರ್ಕಲ್ ನಿರ್ಮಾಣ, ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ, ಪಟ್ಟಣದ ಪೊಲೀಸ್ ಠಾಣೆ ಮುಂಬಾಗದ ವೃತ್ತಕ್ಕೆ ಅಂಬೇಡ್ಕರ್ ಜಯಂತಿ ದಿನ ಆಚರಿಸಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಸ್ವಾಮಿಹಳ್ಳಿ ರಾಮಕೃಷ್ಣ ಹೆಗಡೆ ಒತ್ತಾಯಿಸಿದರು.
ಅವರು ತಾಲೂಕಿನ ಎಲ್ಲಾ ಸಂಘಟನೆಗಳು ಹಾಗೂ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆ ಮತ್ತು ಮನವಿ ನೀಡಿ ಮಾತನಾಡಿ, ದಶಕಗಳಿಂದಲೂ ಸಹ ತಾಲೂಕು ಕೇಂದ್ರದಲ್ಲಿ ಒಂದು ವೃತ್ತಕ್ಕೆ ಅಂಬೇಡ್ಕರ್ ಹೆಸರು ಇಡಬೇಕು ಹಾಗೂ ಅಲ್ಲಿ ಮೂರ್ತಿಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಇದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಾಣಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಆದರೆ ಈ ಬಾರಿಯ ಅಂಬೇಡ್ಕರ್ ಜಯಂತಿ ಪೂರ್ವಬಾವಿ ಸಭೆಯಲ್ಲಿ ತಹಶೀಲ್ದಾರ್ ಅವರನ್ನು ಸಹ ಒತ್ತಾಯಿಸಿದಾಗ ಅವರೂ ಸಹ ಒಪ್ಪಿದ್ದಾರೆ. ಆದ್ದರಿಂದ ಸ್ಥಳೀಯ ಪಟ್ಟಣದ ಆಡಳಿತ ಪುರಸಭೆ ವ್ಯಾಪ್ತಿಯಲ್ಲಿ ಬರುತ್ತಿದ್ದು ತಕ್ಷಣ ಜನರಲ್ ಬಾಡಿ ಮೀಟಿಂಗ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್ ಹಾಗೂ ಮುಖ್ಯಾಧಿಕಾರಿ ಇಮಾಮ್ ಸಾಹೇಬ್ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ, ಬಿಎಂ. ಉಜ್ಜಿನಯ್ಯ, ಕರಾವೇ ಅಧ್ಯಕ್ಷ ಪಿ. ರಾಜು, ದಾದಾಖಲಂದರ್,ಅಂಜುಮಾನ್ ಮುಖಂಡ ಸಿ ಹಸೇನ್, ಕೆ.ಆರ್.ಕುಮಾರಸ್ವಾಮಿ,ಧರ್ಮಾನಾಯ್ಕ್, ಶ್ರೀ ಶೈಲ ಅಲದಹಳ್ಳಿ,ಎಂ.ಎಲ್.ಕೆ ನಾಯ್ಡು,ಸಿದ್ದಪ್ಪ ಚೌಟಿ, ಸತೀಶ್ ಎಂ, ಹೊನ್ನೆಳಪ್ಪ, ಶಿವಲಿಂಗಪ್ಪ,ಸೋಮಪ್ಪ, ರಘು, ತಬಲಾ ಕುಮಾರಸ್ವಾಮಿ, ಮಲ್ಲೇಶ್ ಕಮತ್ತೂರು, ಕುಮಾರಸ್ವಾಮಿ ಹೆಚ್, ನಿಂಗಪ್ಪ ಐಹೊಳೆ ಹಾಗೂ ಇತರರಿದ್ದರು.