ಇಬ್ರಾಹಿಂಪುರದಲ್ಲಿ ಆರೋಗ್ಯ ತಪಾಸಣಾ ಶಿಬಿರ

0
61

ಬಳ್ಳಾರಿ,ಆ.2 : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ/ಸರ್ವೇಕ್ಷಣಾ ಘಟಕ, ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಶಂಕರಬಂಡೆ ಗ್ರಾಪಂ ಸಂಯುಕ್ತಾಶ್ರಯದಲ್ಲಿ ಅಸಾಂಕ್ರಾಮಿಕ ರೋಗಗಳ ಜನಜಾಗೃತಿ ಕಾರ್ಯಕ್ರಮ ಮತ್ತು ಆರೋಗ್ಯ ತಪಾಸಣಾ ಶಿಬಿರವನ್ನು ಶಂಕರಬಂಡೆ ಗ್ರಾಪಂ ವ್ಯಾಪ್ತಿಯ ಇಬ್ರಾಹಿಂಪುರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ 150ಕ್ಕೂ ಹೆಚ್ಚಿನ ಜನರು ಆರೋಗ್ಯ ತಪಾಸಣೆಯ ಸೌಲಭ್ಯ ಪಡೆದುಕೊಂಡರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಬಿ.ಹೆಚ್.ನೀಲಮ್ಮ ಟಿ.ನಾಗರಾಜ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸಾಬ್‌ಜಾನ್, ಗ್ರಾಪಂ ಸದಸ್ಯರಾದ ಕೋಟೆ ಅಕ್ಕಮಹಾದೇವಿ ಕೆ.ನಾಗರಾಜ, ಬಿ.ಅಮರೇಶ, ರಾಮಣ್ಣ ವಡ್ರು, ಹರಿಜನ ಹೇಮಾವತೆಮ್ಮ, ಹೆಚ್.ಉಮಾಪತಿ, ವೈದ್ಯಾಧಿಕಾರಿಗಳಾದ ಡಾ.ಹೆಚ್.ನಿಜಾಮುದ್ದೀನ್, ದಂತ ವೈದ್ಯಾಧಿಕಾರಿಗಳಾದ ಡಾ.ಪ್ರಿಯಾಂಕ ರೆಡ್ಡಿ, ಮಂಜುನಾಥ,ನೇತ್ರ ತಂತ್ರಜ್ಞ ಸಹಾಯಕರು ಸೇರಿದಂತೆ,ಗ್ರಾಮಸ್ಥರು ಇದ್ದರು.

LEAVE A REPLY

Please enter your comment!
Please enter your name here