ಕನ್ನಯ್ಯಲಾಲ್ ಕೊಲೆ ಖಂಡಿಸಿ ಶ್ರೀ ರಾಮ ಸೇನೆಯಿಂದ ಹೊಸಪೇಟೆ ಬಂದ್

0
72

ಹೊಸಪೇಟೆ ಜೂ:01: ರಾಜಸ್ಥಾನದ ಉದಯಪುರದಲ್ಲಿ ನಡೆದ ಕೊಲೆ ಘಟನೆಯನ್ನು ಖಂಡಿಸಿ ಶ್ರೀ ರಾಮ ಸೇನೆಯ ನೇತ್ರತ್ವದಲ್ಲಿ ಹಿಂದೂಪರ ಸಂಘಟನೆಗಳು “ಹೊಸಪೇಟೆ ಬಂದ್ “ಗೆ ಕರೆ ನೀಡಿದೆ ಎಂದು ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಜಗದೀಶ್ ಕಮಾಟಗಿ ತಿಳಿಸಿದರು.
ಗುರುವಾರ ಹೊಸಪೇಟೆಯ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ‌ ಖಂಡನೀಯ, ಮತಾಂದರ ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತೆ‌ಮಾಡಿದೆ. ಪ್ರಧಾನಿಗೂ ಇಂತದ ಮತಾಂದರಿಂದಲೇ ಕೊಲೆ ಬೆದರಿಕೆಯೂ ಇದ್ದು ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬಂದ್ ವೇಳೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಸಲ್ಲಿಸುವ ಮನವಿಯಲ್ಲಿ ಕನ್ನಯ್ಯ ಕುಟುಂಬಕ್ಕೆ ರಾಜಸ್ಥಾನ ಸರ್ಕಾರ 50 ಲಕ್ಷ ಸಹಾಯಹಸ್ತ ನೀಡಬೇಕು, ಅಪರಾಧಿಗಳು ಒಪ್ಪಿಗೆ ಸೂಚಿಸಿದ್ದು ತಕ್ಷಣವೇ ಶಿಕ್ಷೆಗೆ‌ ಗುರಿಪಡಿಸಬೇಕು, ನ್ಯಾಯಾಲಯದ ಪ್ರಕ್ರೀಯೆ ಒಂದು ತಿಂಗಳೊಳಗೆ ಮುಕ್ತಾಯ ಮಾಡಬೇಕು ಎಂದು‌‌ ಒತ್ತಾಯಿಸುವುದಾಗಿ ತಿಳಿಸಿದರು.
ಓಟ್ ಬ್ಯಾಂಕ್ ರಾಜಕಾರಣಿ ಕೈಬಿಟ್ಟು ಇಂತಹ ಮತೀಯಭಾವನೆಗೆ ಧಕ್ಕೆ ತರುವ ಶಾಂತಿ ಕದಡುವ ಕೃತ್ಯ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡ ಮುಂದೆ ಇಂತಹ ತಪ್ಪುಗಳಾಗದಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಲಾಗುವುದು ಎಂದರು.
ಹೊಸಪೇಟೆಯಲ್ಲಿ ನಾಗರಿಕರು, ವ್ಯಾಪಾರಿಗಳು ಸೇರಿದಂತೆ ಎಲ್ಲರೂ ಸ್ವಯಂ ‌ಪ್ರೇರಣೆಯಿಂದ ಸಹಕಾರ ನೀಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಸುರೇಶ ಬಂಗಾರಿ, ನಗರಘಟಕದ ಅಧ್ಯಕ್ಷ ಅನುಪಕುಮಾರ ಹಾಜರಿದ್ದರು.

ವರದಿ:ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here