“ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಡಿವೈಎಫ್ಐ ಪ್ರತಿಭಟನೆ, ಶ್ರದ್ಧಾಂಜಲಿ”

0
121

ಸಂಡೂರು:ಸೆ: ದಿನಾಂಕ 15- 09 -2021 ರಂದು ಮುಸ್ಸಂಜೆ ವೇಳೆ ಸ್ಥಳ ತೋರಣಗಲ್ಲು ಗ್ರಾಮದ ಬಸ್ ನಿಲ್ದಾಣದಲ್ಲಿ DYFI ತೋರಣಗಲ್ಲು ಗ್ರಾಮ ಘಟಕ ನೇತೃತ್ವದಲ್ಲಿ ಆಂಧ್ರಪ್ರದೇಶದ ಆರು ವರ್ಷದ ಬಾಲಕಿ ಮತ್ತು ದೆಹಲಿಯ ಮಹಿಳೆ ಪೋಲಿಸ್ ಅಧಿಕಾರಿ ಹಾಗೂ ಮೈಸೂರು, ಮುಂಬೈ ಹಲವಾರು ಕಡೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ಅತ್ಯಚಾರ ಕೊಲೆ ಪ್ರಕರಣಗಳನ್ನು ಖಂಡಿಸಿ ಕಾಮುಕರಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಒತ್ತಾಯಿಸಿ ತೋರಣಗಲ್ಲು ಗ್ರಾಮದ ಬಸ್ ನಿಲ್ದಾಣದಲ್ಲಿ ಬೊಂಬತ್ತಿ ಜ್ಯೋತಿ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ಪ್ರತಿಭಟಿಸಿಲಾಯಿತು..

ತಾಲೂಕು ಕಾರ್ಯದರ್ಶಿ ಹೆಚ್.ಸ್ವಾಮಿ ಮಾತನಾಡಿ ದೇಶ ಮತ್ತು ರಾಜ್ಯದ ಉದ್ದಗಲಕ್ಕೂ ಇತ್ತೀಚಿನ ದಿನಗಳಲ್ಲಿ ಸರಣಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಆಂಧ್ರಪ್ರದೇಶದ ಹೈದ್ರಾಬಾದ ಮೂಲದಲ್ಲಿ ಆರು ವರ್ಷದ ಬಾಲಕಿ ಮತ್ತು ದೆಹಲಿಯ ಮಹಿಳಾ ಪೋಲಿಸ್ ಪೆದೆ ಮೇಲೆ ಅತ್ಯಾಚಾರ ಘಟನೆಗಳಿಗೆ ಒಳಪಟ್ಟಿರುವ ಕಾಮುಕ ಪುಂಡರುಗಳಿಗೆ ಕಠಿಣ ಶಿಕ್ಷೆ ಮಾತ್ರವಲ್ಲದೆ ಗಲ್ಲು ಶಿಕ್ಷೆ ಕೊಡುವ ಕಾನೂನು ಜಾರಿಯಾಗಬೇಕು ಹಾಗಾದರೆ ಮಾತ್ರ ಇಂತಹ ಭೀಕರವಾದ ಪ್ರಕರಣಗಳು ನಿಲ್ಲಲು ಸಾಧ್ಯ ಎಂದು ಕರೆ ನೀಡಿದರು.

ತಾಲ್ಲೂಕು ಸಹಾ ಕಾರ್ಯದರ್ಶಿ ಸೈಯದ್ ಶರೀಪ್ ಮಾತನಾಡಿ ಹೆಣ್ಣನ್ನು ಮಹಾಲಕ್ಷ್ಮೀ ಎಂದು ಗೌರವದಿಂದ ಕಾಣುವ ಪರಂಪರೆ ನಮ್ಮ ಭಾರತ ದೇಶ ಪುರಾತನ ಕಾಲದಿಂದಲೂ ಹೊಂದಿದೆ.ಅಂತಹ ದೇಶದಲ್ಲಿ ಹಾಡುಹಗಲೇ ಒಬ್ಬ ಹೆಣ್ಣು ಮಗಳನ್ನು ಅಮಾನುಷವಾಗಿ ಅತ್ಶಚಾರ ಮಾಡುವುದಲ್ಲದೇ ಅವಳನ್ನು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡುವ ಹಂತಕ್ಕೆ ನಮ್ಮ ಯುವಜನತೆ ತಲುಪಿದೆ.
ಇಂತಹ ಸಂದಿಗ್ದ ಪರಿಸ್ಧಿತಿಗಳಿಗೆ ಕೇಂದ್ರದ BJP ಸರ್ಕಾರ ನೇರ ಹೊಣೆ.
ಯುವಕರಿಗೆ ಉತ್ತಮ ಶಿಕ್ಷಣ ಸಿಗದೇ ಸರಿಯಾದ ಉದ್ಶೋಗ ಸಿಗದೇ ಈ ರೀತಿಯ ಕ್ರೌರ್ಯಕ್ಕೆ ಮುಂದಾಗುತ್ತಿದ್ದಾರೆ ಎಂದರು.

ಅದೇ ರೀತಿ ಎ.ಸ್ವಾಮಿ ಡಿ.ಎಚ್.ಎಸ್ ಸಂಡೂರು ಇವರು ಮಾತನಾಡಿ ನಮ್ಮ ದೇಶದ ಅಕ್ಕ, ತಂಗಿ, ತಾಯಂದಿರು ನಿರ್ಭಯವಾಗಿ ಓಡಾಡುವವರು ಪ್ರಸಕ್ತ ಸಂದರ್ಭದಲ್ಲಿ ಭಯದ ವಾತಾವರಣದಲ್ಲಿ ಇದ್ದಾರೆ ಇಂತಹ ಪರಿಸ್ಥಿತಿ ತಂದಿರುವ ನಮ್ಮನ್ನು ಆಳುವಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತು ಕೊಳ್ಳಬೇಕು ಬಡಜನರ ಮದ್ಯ ಇಂತಹ ಕ್ರೂರ ಕೃತ್ಯಗಳನ್ನು ನಡೆಸುತ್ತಿರುವ ಮೂಲ ಪಾತ್ರಧಾರಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ತಂದರು ತೋರಣಗಲ್ಲು ಗ್ರಾಮ ಘಟಕದ ಅಧ್ಯಕ್ಷರು ಶಿವರೆಡ್ಡಿ ಇವರು ನಿರೂಪಿಸಿದರು ಕಾರ್ಯದರ್ಶಿ ಹುಲೇಪ್ಪ ಅವರು ವಂದಿಸಿದರು ವೇಬಾಕುಮಾರಿ , ಷಣ್ಮುಖ , ರವಿ, ಗಣೇಶ್, ಚಂದ್ರ, ಅಮರ, ವಂಶಿ, ರೂಪ, ಅಶೋಕ, ಶಿವುಕುಮಾರ್ ಇತರರು ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here