ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕುರಿತು ಜಾಗೃತಿ ಕಾರ್ಯಕ್ರಮ,

0
575

ಸಂಡೂರು:ಆಗಸ್ಟ್:04:- ತಾಲೂಕಿನ ಘೋರ್ಪಡೆ ನಗರದ ಹನ್ನೊಂದನೇ ವಾರ್ಡಿನಲ್ಲಿ ಆಯೋಜಿಸಲಾದ “ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ” ಕಾರ್ಯಕ್ರಮದ ಅಂಗವಾಗಿ ಗುಂಪು ಸಭೆಗಳ ಮೂಲಕ ಮಕ್ಕಳ ತಾಯಂದಿರು ತಮ್ಮ ಮಕ್ಕಳಿಗೆ ಅತಿಸಾರ ಭೇದಿ ಕಾಣಿಸಿಕೊಂಡಾಗ ಹೇಗೆ ಉಪಚರಿಸಬೇಕು, ಓ.ಆರ್.ಎಸ್ ದ್ರಾವಣ ತಯಾರಿಸಬೇಕು, ಜಿಂಕ್ ಮಾತ್ರೆಗಳನ್ನು ಹದಿನಾಲ್ಕು ದಿನ ತಪ್ಪದೇ ಕೊಡಬೇಕು ಮತ್ತು ಶುದ್ಧವಾಗಿ ಕೈಗಳನ್ನು ತೊಳೆದುಕೊಳ್ಳ ಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಯಿತು,

ಮಕ್ಕಳ ಮರಣದ ಪ್ರಮಾಣದಲ್ಲಿ ಶೇಕಡ 10 ರಷ್ಟು ಮಕ್ಕಳು ಅತಿಸಾರ ಭೇದಿಯಾದಾಗ ಸರಿಯಾಗಿ ನಿರ್ವಹಣೆ ಮಾಡದೇ ನಿರ್ಜಲಿಕರಣಕ್ಕೆ ತುತ್ತಾಗಿ ಮರಣಕ್ಕೆ ಕಾರಣವಾಗುವರು, ಅತಿಸಾರ ಭೇದಿಯಿಂದಾಗುವ ಮರಣಗಳನ್ನು ತಪ್ಪಿಸಲು ಪ್ರತಿವರ್ಷ ಆಗಸ್ಟ್ ಒಂದರಿಂದ ಹದಿನೈದನೆಯ ತಾರೀಖಿನವರೆಗೆ “ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ” ಆಚರಿಸಿ, ಮಕ್ಕಳಿರುವ ಮನೆಗಳಿಗೆ ಭೇಟಿಕೊಟ್ಟು ಓ.ಆರ್.ಎಸ್ ಪೊಟ್ಟಣ ಕೊಟ್ಟು ಓ.ಆರ್.ಎಸ್ ದ್ರಾವಣ ತಯಾರಿಸುವ ವಿಧಾನ ಮತ್ತು ಕೈಗಳನ್ನು ಹೇಗೆ ತೊಳೆದುಕೊಳ್ಳಬೇಕು, ಮಗು ಎರಡು ವರ್ಷಗಳ ಒಳಗಿದ್ದರೆ ಎದೆಹಾಲನ್ನು ಕೊಡುವುದನ್ನು ಮುಂದುವರೆಸಬೇಕು, ದ್ರವ ರೂಪದ ಆಹಾರಗಳನ್ನು ಹೆಚ್ಚಾಗಿ ಕೊಡಬೇಕು ಎಂದು ಅರಿವು ಮೂಡಿಸಿದರು, ಈ ಎಲ್ಲಾ ಮಾಹಿತಿಯನ್ನು ಮನೆ ಭೇಟಿಯಲ್ಲಿ ಆಶಾ ಕಾರ್ಯಕರ್ತೆಯರ ಮೂಲಕ ತಾಯಂದಿರಿಗೆ ಅರಿವು ಮೂಡಿಸಲಾಗುತ್ತದೆ, ಈ ವರ್ಷದ ಘೋಷವಾಕ್ಯ “ತೀವ್ರತರ ಅತಿಸಾರ ಭೇದಿಯಿಂದ ಶೂನ್ಯ ಮರಣ” ಈ ನಿಟ್ಟಿನಲ್ಲಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಕೈಗಳನ್ನು ಶುದ್ಧವಾಗಿ ತೊಳೆದು ಕೊಳ್ಳುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು,
ಈ ಸಂದರ್ಭದಲ್ಲಿ ಕುರೇಕುಪ್ಪ ಪುರಸಭೆಯ ಕೌನ್ಸಿಲರ್ ಕೆ.ನಾಗರಾಜ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಕಾರ್ಯಕರ್ತೆ ತೇಜಮ್ಮ,ವಿಜಯಶಾಂತಿ, ಆಶಾ,ಮಂಜುಳಾ, ಮಕ್ಕಳ ತಾಯಂದಿರು ನಳಿನಿ,ರಾಜೇಶ್ವರಿ, ಚೈತ್ರ,ರಿಂಕುಕುಮಾರಿ,ಬಬಿತಾದೇವಿ, ಫಾತಿಮಾ,ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here