ಎಂ.ಪಿ. ವೈ. ದೇವೇಂದ್ರಪ್ಪ ರವರಿಂದ ಕೊಟ್ಟೂರು ಕೆರೆಗೆ ಬಾಗಿನ ಸಮರ್ಪಣೆ

0
619

ಕೊಟ್ಟೂರು: ವಿಜಯನಗರ ಜಿಲ್ಲೆಯ ಮೂರನೇ ಅತೀ ದೊಡ್ಡ ಕೆರೆಗೆ ಪಾತ್ರವಾಗಿರುವ ನಮ್ಮ ಕೊಟ್ಟೂರಿನ ಕೆರೆಯಾಗಿದೆ ಸುಮಾರು ಹದಿಮೂರು ವರ್ಷಗಳ ಕಾಲ ನಂತರ ಕೆರೆಯು ಕೋಡಿ ಬಿದ್ದಿದೆ ಗುರುವಾರ ಬೆಳಗ್ಗೆ 11:30 ಕ್ಕೆ ಲೋಕಸಭೆ ಸದಸ್ಯರಾದ ವೈ . ದೇವೇಂದ್ರಪ್ಪ ರವರಿಂದ ಕೆರೆಗೆ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಿದರು.

ಬಾಗಿನ ಸಮರ್ಪಣೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಆಶೀರ್ವಾದದಿಂದ ಬರೋಬ್ಬರಿ 13 ವರ್ಷಗಳ ನಂತರ ನಮ್ಮ ಕೊಟ್ಟೂರು ಕೆರೆಯು ಕೋಡಿ ಬಿದ್ದಿದೆ ಈ ಕೆರೆಯು 852 ಎಕರೆ ಹೊಂದಿದೆ ಈ ಭಾಗದ ರೈತರಿಗೆ ತುಂಬಾ ಅನುಕೂಲವಾಗಲಿದೆ ಅಂತರ್ಜಲ ಹೆಚ್ಚಾಗುತ್ತದೆ ಈ ಕೆರೆಯನ್ನು ತಾಲೂಕಿನಲ್ಲಿ ಒಂದು ಮಾದರಿ ಕೆರೆಯನ್ನಾಗಿ ಮಾಡುವುದು ನಮ್ಮೆಲ್ಲರ ಜವಾಬ್ದಾರಿವಾಗಿದೆ ಹಾಗೂ ಎರಡನೇ ತುಂಬಿ ಹತ್ತಿರ ನೀರು ಪೋಲ್ ಆಗುತ್ತಿದೆ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈ, ದೇವೇಂದ್ರಪ್ಪ ಲೋಕಸಭಾ ಸದಸ್ಯರು, ವಿಜಯನಗರ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವಗೌಡರು, ಕೊಟ್ಟೂರು ತಾ.ಬಿಜೆಪಿ ಘಟಕದ ಅಧ್ಯಕ್ಷರು ಆರ್. ಎಂ. ವಿಕ್ರಂ, ಮಂಡಕ್ಕಿ ಪ್ರಕಾಶ್, ಬಿಜೆಪಿ ಮುಖಂಡರಾದ ತಿಂದಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷರಾದ ಪಿ. ಉಮೇಶ್, ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here