ಪಟ್ಟಣ ಪಂಚಾಯಿತಿ ವತಿಯಿಂದ ತೇರುಬಯಲು ಸ್ವಚ್ಛತೆ ಕಾರ್ಯ

0
145

ಕೊಟ್ಟೂರು: ಕರ್ನಾಟಕದಲ್ಲಿ ಪ್ರಸಿದ್ದಿ ಹೊಂದಿದ ಶ್ರಿ ಕ್ಷೇತ್ರ ಕೊಟ್ಟೂರು ಗುರುಬಸವೇಶ್ವರ ಜಾತ್ರೆಯು ಫೆಬ್ರವರಿ 16/02/2023 ರಲ್ಲಿ ನಡೆಯಲಿದ್ದು,

ಈಗಾಗಲೇ ತೇರು ಬಯಲು ಜಾಗದಲ್ಲಿ ಇರುವ ಅಂಗಡಿ ಮುಗ್ಗಟ್ಟುಗಳನ್ನು ತೆರುವುಗೊಳಿಸಿ ರಥೋತ್ಸವ ನಡೆಯುವ ಸ್ಥಳವನ್ನು ಕೊಟ್ಟೂರಿನ ತೇರುಬಯಲನ್ನು ಪೂರ್ವಸಿದ್ಧತೆಯಾಗಿ ನೆಲವನ್ನು ಸಮಾನಗೊಳಿಸಲು ಹಾಗೂ ಸ್ವಚ್ಛತೆಯನ್ನು ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಆದೇಶದ ಮೇರೆಗೆ ಎಲ್ಲಾ ಪೌರಕಾರ್ಮಿಕರು ಹಾಗೂ ಹೇಮನಗೌಡರವರು ಇದ್ದು ಸ್ವಚ್ಛತಾ ಕಾರ್ಯವನ್ನು ಪೂರ್ಣಗೊಳಿಸಲಾಯಿತು.

ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಾದ ಎ. ನಸ್ರುಲ್ಲ ರವರು ಪೂರ್ವಸಿದ್ಧತೆಯು ಯಾವುದೇ ಅಡೆ ತಡೆ ಗಳಿಲ್ಲದೆ ತೆರುಬಯಲಿನ ಎಲ್ಲಾ ಶೆಡ್ ಮತ್ತು ಅಂಗಡಿಗಳನ್ನು ತೆರವು ಗೊಳಿಸಿ ಇದೀಗ ತೆರುಬಯಲನ್ನು ನೆಲಸಮ ಹಾಗೂ ಸ್ವಚ್ಛತೆ ಕಾರ್ಯ ನಡೆಸಿರುವುದು ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here