ಸಂಡೂರು:ಜ:26: ತಾಲೂಕಿನ ಓ.ಪಿ ಜಿಂದಾಲ್ ನರ್ಸಿಂಗ್ ಕಾಲೇಜಿನಲ್ಲಿ ಕೋವಿಡ್ ಲಸಿಕಾಕರಣ ಮೇಳ ನಡೆಯಿತು, ಬಹು ದಿನದಿಂದ ಕೋವಿಶೀಲ್ಡ್ ಲಸಿಕೆ ಲಭ್ಯವಿಲ್ಲದೇ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಲಸಿಕಾಕರಣ ನಡೆಯಿತು,
ಒಟ್ಟು 110 ನರ್ಸಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಲಸಿಕೆ ಪಡೆದರು ಹಾಗೆ ಓ.ಪಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಯವರು ಸಹ ಬೂಸ್ಟರ್ ಲಸಿಕೆ ಪಡೆದರು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,
ಈ ಸಂದರ್ಭದಲ್ಲಿ ಶುಶ್ರೂಷಣಾಧಿಕಾರಿ ಮಾರೇಶ್, ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಪ್ರಾಂಶುಪಾಲರಾದ ಕೆ.ಜಡೆಪ್ಪ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಕೆ.ಹೆಚ್.ಪಿ.ಟಿ ಕೋವಿಡ್ ವ್ಯಾಕ್ಸಿನೇಷನ್ ಮೋಟಿವೇಟ್ ಸಿಬ್ಬಂದಿ ಮಂಗಳ ಗೌರಿ, ನಾಗವೇಣಿ, ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಾದ ಅಂಕಿತಾ,ಗೌತಮಿ, ಅಂಜಲಿ, ಭೀಮಾಂಬಿಕೆ, ಜಮೀರಾ, ಚೈತ್ರ,ಜ್ಯೋತಿ, ಧನಲಕ್ಷ್ಮಿ, ದಿವ್ಯಾಜ್ಯೋತಿ, ಪೂಜಾ,ಹಂಸ,ಸವಿತಾ ಇತರರು ಹಾಜರಿದ್ದರು