ಕರ್ನಾಟಕ ಮುಸ್ಲಿಂ ಸಂಘದ ಉಜ್ಜಿನಿ ಹೋಬಳಿ ಘಟಕದ ಅಧ್ಯಕ್ಷರಾಗಿ ಮುಜೀಬ್ ಆಯ್ಕೆ

0
106

ಕರ್ನಾಟಕ ಮುಸ್ಲಿಂ ಸಂಘ ವಿಜಯನಗರ ಜಿಲ್ಲಾ, ಕೊಟ್ಟೂರು ತಾಲ್ಲೂಕು, ಉಜ್ಜಿನಿ ಹೋಬಳಿ ಘಟಕದ ಅಧ್ಯಕ್ಷರನ್ನಾಗಿ ಮುಜೀಬ್ ಇವರನ್ನು ಆಯ್ಕೆ ಮಾಡಿದ್ದಾರೆ.

ಉಜ್ಜಿನಿ ಹೋಬಳಿ ಘಟಕದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಲ್ಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಿಸಿಕೊಳ್ಳಬೇಕು ಮತ್ತು ಕೊಟ್ಟೂರು ತಾಲ್ಲೂಕಿನಾದ್ಯಂತ ಅತ್ಯಂತ ಪ್ರಾಮಾಣಿಕವಾಗಿ ಮತ್ತು ನಿಷ್ಠೆಯಿಂದ ಕರ್ನಾಟಕ ಮುಸ್ಲಿಂ ಸಂಘಟನೆಯನ್ನು ಸಂಘಟಿಸಲು ಆದೇಶ ಪತ್ರದಲ್ಲಿ ಆದೇಶಿಸಲಾಗಿದೆ. ಮುಸ್ಲಿಂ ಸಮಾಜದ ಶೈಕ್ಷಣಿಕ, ಧಾರ್ಮಿಕ, ರಾಜಕೀಯ ಮತ್ತು ಮುಸ್ಲಿಂ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಕೊಂಡು ನಾಡು, ನುಡಿ, ಜಲ, ಗಡಿ ಸಮಸ್ಯೆಗಳಲ್ಲಿ ಕಾಯೋನ್ಮುಖರಾಗುವಂತೆ ರಾಜ್ಯಶಾಖೆಯ ಎಲ್.ಎಸ್.ಬಷೀರ್ ಅಹಮದ್ ರವರು ಆದೇಶ ಪತ್ರದಲ್ಲಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here