“ಹಾಯ್ ಸಂಡೂರ್ “ಪತ್ರಿಕೆ ವರದಿಯ: ಇಂಪ್ಯಾಕ್ಟ್:ಎಚ್ಚೆತ್ತುಕೊಂಡ ಅಧಿಕಾರಿ.!!

0
341

ಕೊಟ್ಟೂರು: ಪಟ್ಟಣದ ಹರಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣದವರೆಗೆ ಸರ್ಕಾರದ ಅನುದಾನದಡಿಯಲ್ಲಿ ನೂತನ ರಸ್ತೆ ಮತ್ತು ವಿದ್ಯುತ್ ದ್ವೀಪದ ಕಂಬಗಳ ನಿರ್ಮಾಣ ಮಾಡಿದ್ದು . ಈ ಕಂಬಗಳ ವಿದ್ಯುತ್ ತಂತಿಗಳನ್ನು ಕಂಬದ ಒಳಗೆ ಮುಚ್ಚುವುದು ಬಿಟ್ಟು.ಈ ವಿದ್ಯುತ್ ದ್ವೀಪದ ಕಂಬದ ತಂತಿಗಳಿಗೆ ಹಲವಾರು ಕಡೆ ಪ್ಯಾಚ್ ಹಾಕಿ ತಂತಿಗಳನ್ನು ಹಾಗೆ ಹೊರಗೆ ಬಿಟ್ಟಿದ್ದಾರೆ.

ಈ ರಸ್ತೆಯಲ್ಲಿ ಒಡಾಡುವ ವಾಹನ ಸವಾರರಿಗೆ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಕೈಗೆ ಸಿಗುವ ಹಾಗೆ ಇರುವ ಅಕಸ್ಮಿಕವಾಗಿ ಜನರಿಗೆ ಈ ವಿದ್ಯುತ್ ತಂತಿಗಳಿಂದ ಕಣ್ಣಿಗೆ ಕಾಣದ ವಿದ್ಯುತ್ ನಿಂದ ಸಾರ್ವಜನಿಕರ ಜೀವಕ್ಕೆ ವಿದ್ಯುತ್ ಸ್ಪರ್ಷಿಸಿ ಅನಾಹುತಗಳು ಉಂಟಾಗುವ ಮೊದಲು ಈ ದೀಪದ ತಂತಿಗಳನ್ನು ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಎಚ್ಚತ್ತುಕೊಂಡು ಈ ತಂತಿಗಳನ್ನು ವಿದ್ಯುತ್ ಕಂಬದ ಒಳಗಡೆ ಸರಿಪಡಿಸಿ ಸಾರ್ವಜನಿಕರನ್ನು ಈ ವಿದ್ಯುತ್ ತಂತಿಗಳಿಂದ ಅನಾಹುತಗಳು ಉಂಟಾಗದಂತೆ ಅಧಿಕಾರಿಗಳು ಕಾಪಡಬೇಕು ಎಂದು ಕರುನಾಡಕಂದ ಈ ಸುದ್ದಿಯನ್ನು ಪ್ರಕಟಸಲಾಗಿತ್ತು ಈ ಸುಧ್ದಿಗೆ ಸ್ಪಂದಿಸಿ ಸಂಬಂಧಪಟ್ಟ ಅಧಿಕಾರಿಗಳು ಪಟ್ಟಣದ ಹರಪನಹಳ್ಳಿ ರಸ್ತೆ ಮರಿಕೊಟ್ಟೂರೇಶ್ವರ ದೇವಸ್ಥಾನದಿಂದ‌ ಬಸ್ ನಿಲ್ದಾಣದವರಗೆ ವಿದ್ಯುತ್ ದ್ವೀಪದ ಕಂಬಗಳಲ್ಲಿ ಹೊರಗೆ ಬಿದ್ದ ವಿದ್ಯುತ್ ತಂತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅದಿಕಾರಿಗಳು ಕಂಬಗಳಲ್ಲಿ ವಿದ್ಯುತ್ ತಂತಿಗಳನ್ನು ಮುಚ್ಚಿದರು. ಅಪಾಯದಲ್ಲಿರವ ಈ ಕೆಲಸಕ್ಕೆ ಮುಂದಾಗಿ ಬಂದು ಸಾರ್ವಜನಿಕರ ರಕ್ಷಣೆ ಕಾಪಾಡಿದ ಅದಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗದವರಿಗೆ ಕರ್ನಾಟಕ ಮಾನವಹಕ್ಕುಗಳ ಜನಾಸೇವಾ ಸಂಸ್ಥೆ (ನೋ.) ಕೊಟ್ಟೂರು ತಾಲೂಕು ಅದ್ಯಕ್ಷರಾದ ಬಿ.ಸತೀಶ್ ಮತ್ತು ಪಧಾದಿಕಾರಿಗಳಾದ ಎಚ್ .ವಿರುಪಾಕ್ಷಿ .ಕೂಡ್ಲಿಗಿ ಸುರೇಶ್. ಜಬ್ಬೀರ್ ಸಾಹೇಬ್ ಧನ್ಯವಾದ ತಿಳಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here