ಶ್ರೀ ವಿಶ್ವೇಶ್ವರಯ್ಯ ಜನ್ಮ ದಿನದಂದು ಇಂಜಿನಿಯರ್ ಗಳಿಂದ ಅವರ ಜನ್ಮ ದಿನದ ಅಚರಣೆ

0
433

ಕೊಟ್ಟೂರು: ಎಂ.ವಿಶ್ವೇಶ್ವರಯ್ಯ ಇವರ ಜನ್ಮ ದಿನೋತ್ಸವದ ಅಂಗವಾಗಿ
ಪಟ್ಟಣದ ಶಿಖಾಪುರ ಪತ್ತಿನ ಸಹಕಾರಿ ಬ್ಯಾಂಕ್ ನ ಕಛೇರಿಯಲ್ಲಿ ಎಂ.ವಿಶ್ವೇಶ್ವರಯ್ಯ ಇಂಜಿನಿಯರ್ ಸಂಘಟನೆ ವತಿಯಿಂದ
ಸಂಘಟನೆ ಪಧಾದಿಕಾರಿಗಳು ಮತ್ತು ಸದಸ್ಯರು ಎಂ.ವಿಶ್ವೇಶ್ವರಯ್ಯ ರವರ ಭಾವ ಚಿತ್ರಕ್ಕೆ ಪೂಜೆ ಹಾಗು ಪುಷ್ಪ ನಮನ ಸಲ್ಲಿಸಿ ಅವರ ಜನ್ಮ ದಿನಾಚರಣೆ ಅಚರಿಸಲಾಯಿತು.

ಈ ಸಂಧರ್ಭದಲ್ಲಿ
ಇಂಜಿನಿಯರ್ ಶ್ರೀ ಅಶೋಕ್ ರವರು ಮಾತನಾಡಿ ಸತತ ಪರಿಶ್ರಮ ಶಿಸ್ತು ಶ್ರೇಷ್ಠ ನಡುವಳಿಕೆ ಸಾಧನೆ.

ತಾಯ್ನಾಡಿಗಾಗಿ ಬದಕು ಈ ಎಲ್ಲಾ ಸಂಸ್ಕಾರಯುತ ಮೌಲ್ಯಗಳನ್ನು ಒಬ್ಬನೇ ವ್ಯಕ್ತಿಯಲ್ಲಿ ಕಾಣಬಹುದಾದರೆ ಅದು ಶ್ರೀ ವಿಶ್ವೇಶ್ವರಯ್ಯರಲ್ಲಿ ಮಾತ್ರವೇ ಅವರು ತೋರಿದ ಪ್ರಾಮಾಣಿಕತೆ. ಸರಳತೆ ಶಿಸ್ತು ಅಧನಿಕ ಯುವ ಇಂಜಿನಿಯರ್ ಗಳಿಗೆ ಮತ್ತು ನಮಗೆಲ್ಲಾ ಆದರ್ಶ ಪ್ರೇರಣೆಯ ಸ್ಪೂರ್ತಿಯ ನೆಲೆಯಾಗಿದೆ.

ಮೋಕ್ಷ ಗೊಂಡು ಶ್ರೀ ವಿಶ್ವೇಶ್ವರಯ್ಯ ಅವರ ಜನುಮ ದಿನವಾದ ಈ ದಿನವನ್ನು ಭಾರತದಲ್ಲಿ ಇಂಜಿನಿಯರ್ ಗಳು ದಿನವನ್ನಾಗಿ ಅಚರಿಸಲಾಗುತ್ತದೆ
ಎಂದು ಹೇಳಿದರು.

ಈ ಸಂಧರ್ಭದಲ್ಲಿ ಇಂಜಿನಿಯರ್ ಗಳಾದ ಚೆನ್ನ ಮಲ್ಲಿಕಾರ್ಜುನ, ಪ್ಯಾಟಿ ಗೌಡ್ರು ಪ್ರಕಾಶ, ಹಳ್ಳಿ ಉಮೇಶ.ಪಟ್ಟಣ ಪಂಚಾಯತಿ ಇಂಜಿನಿಯರ್ ಸಿದ್ದೇಶ್ವರ ಸ್ವಾಮಿ, ದಿವಾಕರ್ ಪಾಟೇಲ್, ಸುಜಯ್ ಪಾಟೇಲ್, ಅಗಡಿ ಮಂಜುನಾಥ, ಇನ್ನಿತರರು ಇಧ್ದರು.

LEAVE A REPLY

Please enter your comment!
Please enter your name here