“ಪ ಪಂ ವತಿಯಿಂದ ಶ್ರಮದಾನ ಸ್ವಚ್ಛತಾ ಅಭಿಯಾನ “

0
51

ಕೊಟ್ಟೂರು : ಮಹಾತ್ಮ ಗಾಂಧೀ- ಜಿಯವರ 154ನೇ ಜಯಂತಿ ಆಚರಣೆ ಪಯುಕ್ತ ಶ್ರಮದಾನ ಕಾರ್ಯಕ್ರಮವು ಅಂಗವಾಗಿ ಕೊಟ್ಟೂರು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ  ಭಾನುವಾರದಂದು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಯಿತು.

ಬೆಳಗ್ಗೆ 10 ರಿಂದ 11 ಗಂಟೆವರೆಗೆ ಒಂದು ಗಂಟೆಗಳ ಕಾಲ ಸಮುದಾಯ ಆರೋಗ್ಯ ಕೇಂದ್ರದ ಆವರಣವನ್ನು ಶುಚಿಗೊಳಿಸಿದರು. ಕೈಯಲ್ಲಿ , ಪೊರಕೆ, ಪುಟ್ಟಿ ,ಮತ್ತು ಇತರ ಪರಿಕರಗಳನ್ನು ಹಿಡಿದುಕೊಂಡು ಅಧಿಕಾರಿಗಳು ಸಿಬ್ಬಂದಿಗಳು ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಮಹಾತ ಗಾಂಧೀಜಿಯವರು ಸಂಸ್ಕೃತಿ ಮತ್ತು ಸ್ವಚ್ಛತಾ ಕಾರ್ಯಕ್ಕೆ ಸಹ ಮಹತ್ವ ನೀಡಿದ್ದರು. ಈ ಹಿನ್ನೆಲೆಯಲ್ಲಿ
ಅವರ ಮಾರ್ಗದರ್ಶನದಲ್ಲಿ ಗಾಂಧೀ ಜಯಂತಿ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಕಾರ್ಯಾಲಯ ಕೊಟ್ಟೂರು ಇವರು ಶ್ರಮದಾನ ಕಾರ್ಯಕ್ರಮ ಭಾನುವಾರ ದಂದು ಹಮ್ಮಿಕೊಳ್ಳಲಾಗಿತ್ತು. ಸ್ವೀಪ್ ನೊಡಲ್ ಅಧಿಕಾರಿ ,ಬೀದಿ ಬದಿ ವ್ಯಾಪಾರಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ನಂತರ ಗಾಂಧೀಜಿಯವರ ಸ್ವಚ್ಛತಾ ಕನಸನ್ನು ಎಲ್ಲರೂ ಒಂದಾಗಿ ನನಸು ಮಾಡೋಣ ಮತ್ತು ವಾರ್ಡ್ ಗಳಲ್ಲಿ ಮನೆಗಳಲ್ಲಿ ಸ್ವಚ್ಛತೆಯನ್ನು ಇಟ್ಟುಕೊಳ್ಳುವಂತೆ ಈ ಅಭಿಯಾನದ ಪ್ರಯುಕ್ತ ಜನತೆಗೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಎ ನಸರುಲ್ಲಾ ಅವರು ಮಾತನಾಡಿ ಹೇಳಿದರು.

ಈ ಸಂದರ್ಭದಲ್ಲಿ ಸ್ವೀಪ್ ಯೋಜನೆ ಅಧಿಕಾರಿ ಶಶಿಧರ್ ಮೈದೂರು, ಪಟ್ಟಣ ಪಂಚಾಯಿತಿ ಮಹಿಳಾ ಸದಸ್ಯರು, ಪಟ್ಟಣ ಪಂಚಾಯಿತಿ ಇಂಜಿನಿಯರ್, ಹಾಗೂ ಆರ್ ಐ ಕೊಟ್ರೇಶ್, ಅನುಷಾ ,ಪರಶುರಾಮ್, ಚಂದ್ರಶೇಖರ್, ಮಂಜುನಾಥ್, ವಿಜಯ್ ಕುಮಾರ್, ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು, ಬೀದಿ ಬದಿಯ ಸಂಘದ ವ್ಯಾಪಾರಸ್ಥರು, ಸಮುದಾಯದ ಆರೋಗ್ಯ ಕೇಂದ್ರದ ಡಾಕ್ಟರ್ ಬಧ್ಯ ನಾಯ್ಕ್, ನಾಗಣ್ಣ, ಆರೋಗ್ಯ ಕೇಂದ್ರ ಸಿಬ್ಬಂದಿ ವರ್ಗದವರು ಇದ್ದರು.

LEAVE A REPLY

Please enter your comment!
Please enter your name here