ಸಂಡೂರು ಪುರಸಭೆ 2024-25ನೇ ಸಾಲಿನ ಬಡ್ಜೆಟ್ ಪೂರ್ವಬಾವಿ ಸಭೆಗೆ ನಿರಾಸಕ್ತಿ

0
19

■ಆಟಕುಂಟು ಲೆಕ್ಕಕ್ಕಿಲ್ಲ, ಪುರಸಭೆ 2024-25ನೇ ಸಾಲಿನ ಬಡ್ಜೆಟ್ ಪೂರ್ವಬಾವಿ ಸಭೆ

ಸಂಡೂರು ಪುರಸಭೆಯ ಕೆ ಎಸ್ ವೀರಭದ್ರಪ್ಪ ಸಭಾಂಗಣದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಜಯಣ್ಣ ಅವರ ಅಧ್ಯಕ್ಷತೆಯಲ್ಲಿ 2024 ಹಾಗೂ2025 ನೇ ಬಡ್ಜೆಟ್ ನ ಪೂರ್ವಬಾವಿ ಸಭೆಯನ್ನು ಕರೆಯಲಾಗಿತ್ತು

ನಿಗದಿತ ಸಮಯಕ್ಕಿಂತ ಅರ್ಧಗಂಟೆ ತಡವಾಗಿ ಆರಂಭವಾದ ಸಭೆಗೆ ಹಾಲಿ ಸದಸ್ಯರಾದ ಕೆ ವಿ ಸುರೇಶ್, ಅಬ್ದುಲ್ ಮುನಾಫ್, ರಾಮಣ್ಣ ಅವರು ಸೇರಿದಂತೆ ಮೂರ್ನಾಲ್ಕು ಜನ ಸಾರ್ವಜನಿಕರು ಸಭೆಗೆ ಹಾಜರಾಗಿದ್ದರು,

ಪುರಸಭೆ ಕಾರ್ಯಾಲಯದಿಂದ ಪೂರ್ವಬಾವಿ ಸಭೆಗೆ ಹಾಜರಾಗಲು ಹಾಲಿ ಸದಸ್ಯರೆಲ್ಲರಿಗೂ ಕೆಲವು ದಿನಗಳಿಗೂ ಮುಂಚೆಯೇ ನೋಟಿಸ್ ನೀಡಿದ್ದರು ಸಹ ನೋಟಿಸ್ ನ್ನು ಸ್ವೀಕರಿಸಿದ್ದರೂ ಕೂಡ ಸದಸ್ಯರು ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು, ಜೊತೆಗೆ ಸಾರ್ವಜನಿಕರು, ಇಲಾಖೆಯ ಕೆಲ ಅಧಿಕಾರಿಗಳು ಸಹ ಗೈರು ಹಾಗಿರುವುದು ನೋಡಿದರೆ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಗೆ ನಿರಾಸಕ್ತಿ ತೋರಿಸಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸಭೆಯಲ್ಲಿ ಹಾಜರಿದ್ದ ಸದಸ್ಯರು ಮತ್ತು ಸಾರ್ವಜನಿಕರಿಂದ ಹಲವು ಮಹತ್ವದ ವಿಷಯಗಳ ಚರ್ಚೆಯಾಗುತ್ತಿದ್ದರೆ ಅದನ್ನು ಕೇಳಿಸಿಕೊಳ್ಳುವ ಸದಸ್ಯರು ಹಾಗೂ ಸಾರ್ವಜನಿಕರು ಇಲ್ಲದಂತಾಗಿತ್ತು ಒಟ್ಟಿನಲ್ಲಿ 2024 -2025 ಸಾಲಿನ ಬಡ್ಜೆಟ್ ಪೂರ್ವಬಾವಿ ಸಭೆಗೆ ನೆಪ ಮಾತ್ರಕ್ಕೆ ಅನ್ನುವಂತಿತ್ತು

ಈ ಸಂಧರ್ಭದಲ್ಲಿ ಮುಖ್ಯಾಧಿಕಾರಿ ಜಯಣ್ಣ, ಹಗರಿ ಪ್ರಭುರಾಜ್, ಶ್ರೀನಿವಾಸ್ ಆರ್ ಓ, ಹಾಗೂ ರಮೇಶ್, ವೆಂಕಟೇಶ್ ನರಸಿಂಹ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here