ಜೋಗಿಕಲ್ಲು ಚಿನ್ನಾಪುರದಯ್ಯ ಜಾತ್ರೆಯಲ್ಲಿ ಬಂಡ್ರಿ ಸಾರ್ವಜನಿಕ ಆಸ್ಪತ್ರೆ ಹಾಗೂ ವಿಮ್ಸ್ ರಕ್ತಿನಿಧಿ ವತಿಯಿಂದ ಉಚಿತ ರಕ್ತದಾನ ಮತ್ತು ಆರೋಗ್ಯ ಶಿಬಿರ

0
91

ಬಂಡ್ರಿ:ಜ:01:-ಸಂಡೂರು ತಾಲೂಕು ಹೆಚ್ ಕೆ ಹಳ್ಳಿ ಗ್ರಾಪಂ ವ್ಯಾಪ್ತಿಯ ಜೋಗಿಕಲ್ಲು ಗ್ರಾಮದಲ್ಲಿ ಚಿನ್ನಾಪುರದಯ್ಯ ಜಾತ್ರೆ ಪ್ರಯುಕ್ತ ಬಂಡ್ರಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ವಿಮ್ಸ್ ರಕ್ತ ನಿಧಿ ವತಿಯಿಂದ ಉಚಿತ ರಕ್ತ ದಾನ ಶಿಬಿರ ಹಾಗೂ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿದೆ.

ಪ್ರತಿಯೊಬ್ಬ ನಾಗರಿಕರು ತಲಾ ಒಬ್ಬರಂತೆ ರಕ್ತ ದಾನಿಗಳನ್ನು ಮನವೊಲಿಸಿ ಅವರನ್ನು ಕ್ಯಾಂಪಿಗೆ ಕರೆತಂದು ರಕ್ತದಾನ ಮಾಡಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ

ನಿಮ್ಮ ಊರಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಎಲ್ಲಾ ಯುವಕ ಸಂಘ, ಸಂಸ್ಥೆಗಳಿಗೆ ಹಾಗೂ ಇತರೆ ಆಸಕ್ತಿಯುಳ್ಳವರಿಗೆ ತಿಳಿಸಿ ಹಾಗೂ ವಿಷಯವನ್ನು ಶೇರ್ ಮಾಡಿ.ಈ ಕಾರ್ಯಕ್ರಮಕ್ಕೆ ಹೆಚ್ಚಿನ ರೀತಿಯಲ್ಲಿ ಜನರು ಪಾಲ್ಗೊಳ್ಳುವಂತೆ ಮಾಡಿ.

ನಿಮ್ಮ ಸುತ್ತ ಮುತ್ತಲಿನ ಜನರಿಗೆ ರಕ್ತದಾನದ ಮಹತ್ವ ಹಾಗೂ ಅದರಿಂದ ಆಗುವ ಉಪಯೋಗಗಳ ಅರಿವು ಮೂಡಿಸಿ ಅವರನ್ನು ರಕ್ತ ದಾನ ಮಾಡುವುದಕ್ಕೆ ಪ್ರೇರೇಪಿಸಬೇಕು.ಧನ್ಯವಾದಗಳು ಇದರ ಜೊತೆಗೆ ಹೆಲ್ತ್ ಕ್ಯಾಂಪ್ ಅಲ್ಲಿ ಈ ಕೆಳಕಂಡ ಸೇವೆಗಳನ್ನು ಕೂಡ ನೀಡಲಾಗುವುದು , ದಯವಿಟ್ಟು ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ಬಂಡ್ರಿ ಪ್ರಾಥಮಿಕ ಆಡಳಿತ ವೈದ್ಯಾಧಿಕಾರಿ ಡಾ. ಭರತ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.

ಆರೋಗ್ಯ ಶಿಬಿರದಲ್ಲಿ ಸಿಗುವ ಸೌಲಭ್ಯಗಳು:

■ಕೋವಿಷಿಲ್ಡ್ ಬೂಸ್ಟರ್ ಲಸಿಕೆ ಹಾಕಲಾಗುವುದು

■ಬಿಪಿ ಮತ್ತು ಶುಗರ್ ಟೆಸ್ಟಿಂಗ್ ಮಾಡಲಾಗುವುದು

■Tb ಕಾಯಿಲೆಯ ಕುರಿತು ಅರಿವು ಮೂಡಿಸಿ ಕಫ ಪರೀಕ್ಷೆ ಮಾಡಲಾಗುವುದು

■ಕುಷ್ಠ ರೋಗದ ಅರಿವು ಮೂಡಿಸುವ ಸ್ಪರ್ಶ ಕಾರ್ಯಕ್ರಮದ ಕುರಿತು ಜಾಗೃತಿ_

■Abha card ಜನರೇಟ್ ಮಾಡಿಕೊಡಲಾಗುವುದು

■ಜ್ವರ , ನೆಗಡಿ , ಕೆಮ್ಮು ಹಾಗೂ ಮುಂತಾದ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಬಂಡ್ರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತವರ್ಗದವರು ತಿಳಿಸಿದ್ದಾರೆ

ಈ ಎಲ್ಲಾ ಕಾರ್ಯಕ್ರಮಗಳ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಎಲ್ಲರಲ್ಲಿ ವಿನಂತಿ

LEAVE A REPLY

Please enter your comment!
Please enter your name here