ಬಳ್ಳಾರಿ/ಹೊಸಪೇಟೆ,ಫೆ.19: ಹೊಸಪೇಟೆ ತಾಲ್ಲೂಕು ಕಚೇರಿಯ ವತಿಯಿಂದ ಸವಿತಾ ಮಹರ್ಷಿ ಹಾಗೂ ಛತ್ರಪತಿ ಶಿವಾಜಿ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾಯಿತು.
ಹೊಸಪೇಟೆಯ ತಹಸೀಲ್ದಾರರದ ಹೆಚ್.ವಿಶ್ವನಾಥ್ ಅವರು ಸವಿತಾ ಮಹರ್ಷಿ ಹಾಗೂ ಛತ್ರಪತಿ ಶಿವಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಮಾಜದ ಮುಖಂಡರಿಗೆ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಉಪತಹಶಿಲ್ದಾರರಾದ(ಗ್ರೇಡ್-2) ಮೇಘನಾ, ಶಿರಸ್ತೇದಾರರಾದ ಶ್ರೀಧರ್, ರಮೇಶ್, ತಾಲ್ಲೂಕು ಕಚೇರಿಯ ಪ್ರ.ದ.ಸ.ರಾದ ಪಾಪಣ್ಣ, ಆಹಾರ ಇಲಾಖೆಯ ಪ್ರ.ದ.ಸ. ಮಂಜುನಾಥ್, ನಗರಸಭೆಯ ಸಮುದಾಯದ ಸಂಘಟನಾ ಅಧಿಕಾರಿಯಾದ ಎ.ರವಿಕುಮಾರ್ ಹಾಗೂ ತಾಲ್ಲೂಕು ಕಚೇರಿಯ ಸಿಬ್ಬಂದಿಗಳು ಮತ್ತು ಸವಿತಾ ಸಮಾಜದ ಮುಂಖಡರರು ಹಾಗೂ ಮರಾಠ ಸಮಾಜದ ಮುಂಖಡರರು ಭಾಗವಹಿಸಿದರು.