ಸಿಂಧನೂರು ನಗರದ ಖದಿರಿಯಾ ಕಾಲೋನಿಯಲ್ಲಿ ಪ್ರಾದೇಶಿಕ ಅರಣ್ಯ ವಲಯ ಸಿಂಧನೂರು ಹಾಗೂ ವನಸಿರಿ ಫೌಂಡೇಶನ್ ಸಹಯೋಗದಲ್ಲಿ ದಿ.ಅಬ್ಬುಮೇಸ್ತ್ರಿ ಸ್ಮರಣಾರ್ಥ ವನಮೋಹತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪರಿಸರ ಜಾಗೃತಿ ಫಲಕಗಳನ್ನು ಹಿಡಿದ ಮಕ್ಕಳು ಘೋಷಣೆ ಕೂಗಿದರು. ನಂತರ ಸಸಿಗಳನ್ನು ನೆಡಲಾಗಿತು.
ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಜಿಲ್ಲಾ ಪಂಚಾಯತಿ ಸದಸ್ಯರಾದ ಶಿವನಗೌಡ ಗೋರೆಬಾಳ್, ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಶ್ರೀ ಅಮರೇಗೌಡ ಮಲ್ಲಾಪುರ, ಗೌರವಾಧ್ಯಕ್ಷರು ಶಂಕರಗೌಡ ಎಲೆಕೂಡ್ಲಿಗಿ, ಸದಸ್ಯರಾದ ಬುದೇಷ್ ಮರಾಠ, ಮಾಂತೇಶ ಉಪ್ಪಾರ,ಪ್ರದೀಪ್, ರುದ್ರಗೌಡ, ಮುತ್ತು ಪಾಟೀಲ್ ಭೂತಲದಿನ್ನಿ ಕರವೇ ಯುವ ಸೇನೆ ಜಿಲ್ಲಾ ಅಧ್ಯಕ್ಷ ಉಮೆಶ್ ವಿಟ್ಲಾಪುರ, ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ತಾಲೂಕು ಅಧ್ಯಕ್ಷ ಲಕ್ಷ್ಮಣ ಭೂವಿ, ನಗರ ಘಟಕ ಅಧ್ಯಕ್ಷ ದಾವಲ್ ಸಾಬ್ ದೊಡ್ಮನಿ ಕರವೇ ಯುವ ಸೇನೆ ಪದಾಧಿಕಾರಿಗಳು ಹಾಗೂ ವನಸಿರಿ ಫೌಂಡೇಶನ್ ಬಳಗ ಪರಿಸರ ಪ್ರೇಮಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು..
ವರದಿ:ಅವಿನಾಶ ದೇಶಪಾಂಡೆ