ಹೊಸಕೇರಿ ಕೆರೆ ಪರಿಶೀಲಿಸಿದ ಸಣ್ಣ ನೀರಾವರಿ ಇಲಾಖಾಧಿಕಾರಿ

0
94

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ, ತಾಲೂಕು ದಶಮಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹೊಸಕೇರಿ ಗ್ರಾಮದ.ಜೀವ ಜಲ ಕೆರೆಗೆ,ಹಗರಿಜೊಮ್ಮನಹಳ್ಳಿ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ವಿನಾಯಕ ಭೇಟಿ ಕೊಟ್ಟು ಕೆರೆ ಸ್ಥಿತಿ ಗತಿ ಪರಿಶೀಲನೆ ಮಾಡಿದರು, ಕೆರೆ ಅಭಿವೃದ್ಧಿ ಕುರಿತು ಗ್ರಾಮಸ್ಥರೊಂದಿಗೆ ಚರ್ಚಿಸಿದರು,

ಗ್ರಾಪಂ ಅಧ್ಯಕ್ಷೆ ರೋಹಿಣಿ ಕೊಟ್ರೇಶ್ ಸೇರಿದಂತೆ ಗ್ರಾಪಂ ಸದಸ್ಯರು ಮಾತನಾಡಿದರು.ಎರೆಡು ಮೂರು ದಶಕಗಳನ್ನು ಕಂಡಿರುವ ಕೆರೆಯ ರಕ್ಷಣೆಗೆ,ಶಾಸಕ ಭೀಮಾನಾಯ್ಕರವರಲ್ಲಿ ಮನವಿ ಮಾಡಿಕೊಂಡಿದ್ದು, ಕೂಡಲೇ ಶಾಸಕರು ತಮ್ಮಅಹವಾಲಿಗೆ ಸ್ಪಂಧಿಸಿದ್ದು ಸಂಬಂಧಸಿದ ಇಲಾಖಾಧಿಕಾರಿಗಳನ್ನು ಕೆರೆ ಪರಿಶಿಲನೆಗೆ ಕಳುಹಿಸಿ ಕೊಟ್ಟಿದ್ದಾರೆ.

ಶಾಸಕರ ಸ್ಪಂಧನೆ ನಿಜಕ್ಕೂ ಆದರ್ಶನೀಯ. ಗ್ರಾಮದ ಹಾಗೂ ಸಮಸ್ಥ ಗ್ರಾಮ ಪಂಚಾಯ್ತಿ ವತಿಯಿಂದ ಮತ್ತು ಸಮಸ್ಥ ಗ್ರಾಮ ಪಂಚಾಯ್ತಿ ಸರ್ವಸದಸ್ಯರ ಪರವಾಗಿ ಕ್ಷೇತ್ರದ ಶಾಸಕರಾದ ಭೀಮಾನಾಯ್ಕರವರಿಗೆ,ಕೃತಜ್ಞತೆಗಳನ್ನ ಅರ್ಪಿಸುವುದಾಗಿ ಅಧ್ಯಕ್ಷೆ ಶ್ರೀಮತಿ ರೋಹಿಣಿ ಕೊಟ್ರೇಶರವರು ತಿಳಿಸಿದರು.
ಸಣ್ನ ನೀರಾವರಿ ಇಲಾಖಾಧಿಕಾರಿ ಪ್ರಾಮಾಣಿಕರಿದ್ದು,ಅವರು ಕೆರೆ ಸಂರಕ್ಷಣೆಗೆ ಆಧ್ಯತೆ ನೀಡಿ ಕೆರೆ ಅಭಿವೃದ್ಧಿಯನ್ನು ಮಾಡುತ್ತಾರೆಂಬ ಭರವಸೆ ತಮ್ಮಲ್ಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ವಿನಾಯಕ ರವರು ಮಾತನಾಡಿ ಕೆರೆ ಸಂರಕ್ಷಣೆಗೆ ಮೊದಲ ಆಧ್ಯತೆ ನೀಡಿ,ಅಗತ್ಯ ಕ್ರಮಗಳನ್ನು ಶೀಘ್ರವೇ ಕೈಗೊಳ್ಳಲಾಗುವುದು.ಕೆರೆ ಅಭಿವೃದ್ಧಿ ಹಾಗೂ ನವೀಕರಿಸುವ ಕುರಿತು ಉನ್ನತಾಧಿಕಾರಿಗಳಲ್ಲಿ ಮತ್ತು ಶಾಸಕರಲ್ಲಿ ಚರ್ಚಿಸಿ,ಯೋಜನಾ ವರದಿ ಸಿದ್ದಪಡಿಸಿ ಉನ್ನತಾಧಿಕಾರಿಗಳಲ್ಲಿ ಅಗತ್ಯ ಅನುದಾನಕ್ಕೆ ಕೋರಲಾಗುವುದು ಎಂದರು.ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

✍️..ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

LEAVE A REPLY

Please enter your comment!
Please enter your name here