ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಅಗ್ನಿ ಶಾಮಕದಳಹಾಗೂ ಆಂಜನೇಯ ದೇವಸ್ಥಾನದ ಆವರಣದಲ್ಲಿ
ಶ್ರೀ ಶಕ್ತಿ ರಕ್ತ ಭಂಡಾರ ಸಂಸ್ಥೆ ವ್ಯವಸ್ಥಾಪಕರಾದ ಸೋಮನಗೌಡ ಬಾದರ್ಲಿ ಅವರು ಪಕ್ಷಿಗಳ ನೀರಿನ ದಾಹವನ್ನು ತೀರಿಸುವ ಉದ್ದೇಶದಿಂದ ಗಿಡಗಳಿಗೆ ನೀರಿನ ಅರವಟ್ಟಿಗೆ ಕಟ್ಟಿ ಹುಟ್ಟುಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು
ಪ್ರತಿ ಒಬ್ಬರು ತಮ್ಮ ತಮ್ಮ ಮನೆಯ ಮುಂದೆ ಅಥವಾ ತಮ್ಮ ಮನೆಯ ಮಹಡಿ ಮೇಲೆ ಮಣ್ಣಿನ ಮಡಿಕೆ ಇಟ್ಟು ನೀರು ಹಾಕುವ ಮೂಲಕ ಪಕ್ಷಿಗಳ ದಾಹ ತೀರಿಸುವ ಕಾಯಕಕ್ಕೆ ಕೈಜೋಡಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಹಾಗೂ ಸದಸ್ಯರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸಿಬ್ಬಂದಿಗಳು, ಹಲವರಿದ್ದರು.
ವರದಿ:ಅವಿನಾಶ ದೇಶಪಾಂಡೆ