ಸೇವಾ ಭಾರತಿ ಮತ್ತು ಸ್ವಾಮಿ ವಿವೇಕಾನಂದ ಸಮಗ್ರ ಆರೋಗ್ಯ ಕೇಂದ್ರ, ರಾಯಚೂರು, ಸಹಯೋಗದಲ್ಲಿಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಪರಿಸರದಲ್ಲಿ ‘ಕೋವಿಡ್ ಆರೈಕೆ ಮತ್ತು ಪ್ರತ್ಯೇಕ ಕೇಂದ್ರ’ವನ್ನು ಆರಂಭಿಸಲಾಯಿತು.
ಜಿಲ್ಲಾ ಆರೋಗ್ಯಾಧಿಕಾರಿಗಳಾದ ಡಾ. ಕೆ. ರಾಮಕೃಷ್ಣ ಅವರು ಕೇಂದ್ರದ ಉದ್ಘಾಟನೆಯನ್ನು ಮಾಡಿ, ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಸೇವಾ ಭಾರತಿಯು ಆರಂಭಿಸುತ್ತಿರುವ ಈ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಾಮಾಜಿಕ ಕಳಿಕಳಿ ಹಾಗು ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡುತ್ತಿರುವ ತಮಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರದ ಶಾಸಕರಾದ ಶ್ರೀ ಶಿವರಾಜ ಪಾಟೀಲ್, ಶ್ರೀ ಸದಾನಂದ ಪ್ರಭು, ಡಾ. ನಾಗರಾಜ ಭಾಲ್ಕಿ, ಡಾ. ಬಸನಗೌಡ, ಡಾ. ವೆಂಕಟೇಶ ನಾಯಕ್, ಡಾ. ಆನಂದ ಫಡ್ನೀಸ್, ಡಾ. ಕಿರಣ್ ಖೇಣೇದ್, ಶ್ರೀ ವಿಷ್ಣುಕಾಂತ ಬುತಡಾ ಸಹಿತ ಅನೇಕ ಗಣ್ಯರು, ಹಿತೈಷಿಗಳು ಹಾಗು ಸ್ವಯಂಸೇವಕರು ಉಪಸ್ಥಿತರಿದ್ದರು.