ಹಸಿರು ಸಿಂಧನೂರು ಮಾಡುತ್ತಿರುವವರಿಗೆ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ

0
214

ಸಿಂಧನೂರು ನಗರದ ಬಾಬಾ ರಾಮದೇವ್ ದೇವಸ್ಥಾನದಲ್ಲಿ ಪರಿಸರ ಸಮಾಗಮ ಕಾರ್ಯಕ್ರಮದಲ್ಲಿ ಹಸಿರು ಸಿಂಧನೂರು ಮಾಡಲು ಶ್ರಮಿಸುತ್ತಿರುವ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು, ಪರಿಸರಪ್ರೇಮಿಗಳು,ವಿವಿಧ ಗಣ್ಯರ ನಡುವೆ ನಗರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಸಿಗಳನ್ನು ನೆಡುವ ಕಾರ್ಯಕ್ಕೆ ಮುಂದಾಗಲು ಸಮ್ಮತಿ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹಲವು ಪರಿಸರ ಪ್ರೇಮಿಗಳನ್ನು, ಹಸಿರು ಸಿಂಧನೂರು ಮಾಡುತ್ತಿರುವ ಸಂಘಟಕರನ್ನು ಹಸಿರು ಶಾಲು ಹೊದಿಸಿ ಗೌರವಿಸಲಾಯಿತು…

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಯುವ ಶಕ್ತಿ ಸೇವಾ ಟ್ರಸ್ಟ್ ಸಂಸ್ಥಾಪಕ ರಾಜ್ಯಾಧ್ಯಕ್ಷರು ಸಂತೋಷ್ ಅಂಗಡಿ , ಸಮಾಜ ಸೇವಕರು ಡಾ ಚನ್ನನಗೌಡ ಪಾಟೀಲ್ , ಸಹನಾ ಮೆಡಿಕಲ್ ರಾಜಶೇಖರ್ ಪಾಟೀಲ್ , ಲಕ್ಷ್ಮಣ್ ರಾವ್ ,ಪರಿಸರ ಪ್ರೇಮಿ ಸುರೇಶ ಹಚ್ಚೋಳ್ಳಿ , ವಿ ಸಿ ಪಾಟೀಲ್ , ಬಾಬಾ ರಾಮದೇವ್ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಹಿಮತ್ ಸಿಂಗ್ , ಸ್ವಾಮಿ ವಿವೇಕಾನಂದ ವೇದಿಕೆ ಅಧ್ಯಕ್ಷ ಪಿ. ಶ್ರೀನಿವಾಸ್ , ಸದಸ್ಯ ರಮೇಶ ಜಿಜೆ, ಸಿವಿ ಗೌಡ, ವಿರೇಶ ಮಾಳಿಗಿ, ಪ್ರಶಾಂತ್ ರಾಠೋಡ್, ಲಯನ್ಸ್ ಕ್ಲಬ್ ಅದ್ಯಕ್ಷ ಪದ್ಮನಾಯ್ಡು , ಯುವ ಮುಖಂಡ ಅಜಯನಾಥ್ ದಾಸರಿ ,ಜೀವ ಸ್ಪಂದನ ಸೇವಾ ಸಂಸ್ಥೆ ಕಾರ್ಯದರ್ಶಿ ಅವಿನಾಶ ದೇಶಪಾಂಡೆ , ಇದ್ದರು ಮೋಹನಗೌಡ ನಿರೂಪಿಸಿದರು, ಶ್ರೀಶೈಲ ಭಗವತಿ ವಂದಿಸಿದರು

ವರದಿ: ಅವಿನಾಶ ದೇಶಪಾಂಡೆ

LEAVE A REPLY

Please enter your comment!
Please enter your name here