ಇಂದು ದೇಶದ ಮತ್ತು ರಾಜ್ಯದ ಜನತೆ ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ನರಳಿ ಇವತ್ತು ವ್ಯಾಕ್ಸಿನ್ ಸಿಗದೆ ಸಾವನ್ನಪ್ಪುತ್ತಿರುವುದು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ.
ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮಾನ್ಯ ಡಿಕೆ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿಗಳು,ವಿರೋಧಪಕ್ಷದ ನಾಯಕರಾದ ಮಾನ್ಯ ಸಿದ್ರಾಮಯ್ಯನವರ ನೇತೃತ್ವದಲ್ಲಿ ಇವತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ನಮ್ಮ ಶಾಸಕರುಗಳು 90 ಕೋಟಿ ರೂಪಾಯಿಗಳು ಹಾಗೂ ಪಕ್ಷದಿಂದ 10 ಕೋಟಿ ರೂಪಾಯಿಗಳು ಒಟ್ಟು 100 ಕೋಟಿ ರೂಪಾಯಿಗಳನ್ನು ಸೇರಿಸಿ ಕರ್ನಾಟಕದ ಜನತೆಗೆ ವ್ಯಾಕ್ಸಿನ್ ಹಾಕುವುದಕ್ಕೆ ಮುಂದೆ ಬಂದಿದೆ.
ಆದರೆ ಇವತ್ತು ರಾಜ್ಯ ಸರ್ಕಾರ ಈ ನಿಮಿಷದವರೆಗೂ ಅದಕ್ಕೆ ಅನುಮೋದನೆಯನ್ನು ಕೊಟ್ಟಿಲ್ಲ, ಅದಕ್ಕೆ ಅನುಮೋದನೆಯನ್ನು ಕೊಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ. ಇವತ್ತು ಕೇಂದ್ರ ಸರ್ಕಾರ ಸುಮಾರು 6 ಕೋಟಿ 60 ಲಕ್ಷದಷ್ಟು ವ್ಯಾಕ್ಸಿನ್ ನ್ನು ನಮ್ಮ ರಾಜ್ಯದ ಜನಸಂಖ್ಯೆ ಎಷ್ಟಿದೆಯೋ ಅಷ್ಟು ವ್ಯಾಕ್ಸಿನ್ ನ್ನು ಹೊರದೇಶಕ್ಕೆ ರಫ್ತುಮಾಡಿದೆ
ಆದರೆ ಇವತ್ತು ಕೊರೊನಾ ವೈರಸ್ ನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ, ತತ್ ಕ್ಷಣ ಇದಕ್ಕೆ ಅನುಮೋದನೆಯನ್ನು ಕೊಡಬೇಕೆಂದು ಒತ್ತಾಯಿಸಿದರು