ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸುಶೀಲಾ ನಗರದಲ್ಲಿ ಗ್ರಾಪಂ ವ್ಯಾಪ್ತಿಯ ಆಶಾಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಮತ್ತು ಟೋಲ್ ಸಿಬ್ಬಂದಿಗಳಿಗೆ 03.06.2021 ಗುರುವಾರ ಸುಶೀಲಾನಗರ ದಿಂದ ಹೊಸಪೇಟೆಗೆ ಹೋಗುವ ಮುಖ್ಯರಸ್ತೆಯ ಟೋಲ್ ಗೇಟ್ ಹತ್ತಿರ ಸಂಡೂರು ತಾಲೂಕಿನ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಎಫ್.ಕುಮಾರನಾಯ್ಕ ಅವರು ಪಡಿತರ ಕಿಟ್ ಗಳನ್ನು ವಿತರಿಸಿದರು.
ಲಾಕ್ ಡೌನ್ ಸಂಧರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆಸಲ್ಲಿಸಿದ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮಾಡುತ್ತಿರುವ ಸೇವೆಯ ಮುಂದೆ ನಮ್ಮ ಈ ಅಳಿಲು ಸೇವೆ ಬಹಳ ಚಿಕ್ಕದು ಎಂದು ಎಫ್ ಕುಮಾರ ನಾಯ್ಕ್ ಹೇಳಿದರು
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್ ಗೊಂದಿ, ಎಸ್ಸಿ ಮೋರ್ಚಾ ತಾಲೂಕು ಕಾರ್ಯಕಾರಣಿ ಸಮಿತಿ ಸದಸ್ಯ ಎಫ್.ಕೃಷ್ಣಾನಾಯ್ಕ, ಮುಖಂಡ ನರಸಿಂಗನಾಯ್ಕ ಹಾಗೂ ಸುಶೀಲಾ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮತ್ತು ಟೋಲ್ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು