ಎಲ್ಲಾ ಆರೋಪಗಳಿಂದ ಮುಕ್ತವಾದ ಸಾ.ರಾ ಮಹೇಶ್…! ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆ..?

0
130

ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ. ಆರ್​. ನಗರ ಶಾಸಕ ಸಾ ರಾ ಮಹೇಶ್​ ತಿಳಿಸಿದ್ದಾರೆ. ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಾರಾ ಮಹೇಶ್​ ವಿರುದ್ಧ ಸುಳ್ಳು ಆರೋಪ ಮಾಡಿ, ಅವರ ತೇಜೋವಧೆಗೆ ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ಹಕ್ಕುಚ್ಯುತಿ ಮಂಡಿಸುವುದಾಗಿ ತಿಳಿಸಿದ್ದಾರೆ. ಇಲ್ಲಸಲ್ಲದ ಆರೋಪ ಮಾಡಿದ್ದ ರೋಹಿಣಿ ಸಿಂಧೂರಿ, ನಾನು ರಾಜಕಾಲುವೆ ಮೇಲೆ ಚೌಟ್ರಿಯನ್ನು ನಿರ್ಮಿಸಿದ್ದೆ ಎಂದೂ  ಗೋಮಾಳ ಜಾಗವನ್ನು ಮೈಸೂರಿನಲ್ಲಿ ಒತ್ತುವರಿ ಮಾಡಿದ್ದೇನೆಂದೂ ಆರೋಪ ಮಾಡಿದ್ದರು. ಆದರೆ ಇದೀಗ ಪ್ರಾದೇಶಿಕ ಆಯುಕ್ತರು ರಚಿಸಿದ ತಂಡ ನೀಡಿರುವ ವರದಿಯಲ್ಲಿ ನನಗೆ ಕ್ಲೀನ್​ಚಿಟ್​ ನೀಡಲಾಗಿದೆ ಎಂದು ಸಾ ರಾ ಮಹೇಶ್‍ ಹೇಳಿದ್ದಾರೆ. ವಿನಾಕಾರಣ ತೇಜೋವಧೆ ಯಂತಹ ಸುಳ್ಳು ಆರೋಪವನ್ನು ಮಾಡಿರುವ ಕಾರಣ, ಮುಂದಿನ ಅಧಿವೇಶನದಲ್ಲಿ ಸ್ಪೀಕರ್​ ವಿಶ್ವೇಶ್ವರ್​ ಹೆಗಡೆ ಕಾಗೇರಿ ಅವರಿಗೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ಕೋರಿ, ಸಂಪೂರ್ಣ ದಾಖಲೆಗಳುಳ್ಳ ಪತ್ರವನ್ನು ಬರೆದಿದ್ದೇನೆ ಎಂದು ಸಾ ರಾ ತಿಳಿಸಿದ್ದಾರೆ.ವಿನಾಕಾರಣ ತೇಜೋವಧೆ ಯಂತಹ ಸುಳ್ಳು ಆರೋಪವನ್ನು ಮಾಡಿರುವ ಕಾರಣ, ಮುಂದಿನ ಅಧಿವೇಶನದಲ್ಲಿ ಸ್ಪೀಕರ್​ ವಿಶ್ವೇಶ್ವರ್​ ಹೆಗಡೆ ಕಾಗೇರಿ ಅವರಿಗೆ ಹಕ್ಕುಚ್ಯುತಿ ಮಂಡಿಸಲು ಅನುಮತಿ ಕೋರಿ, ಸಂಪೂರ್ಣ ದಾಖಲೆಗಳುಳ್ಳ ಪತ್ರವನ್ನು ಬರೆದಿದ್ದೇನೆ ಎಂದು ಸಾ ರಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here