ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಗುರುವಾರ ವನಸಿರಿ ಫೌಂಡೇಶನ್ ವತಿಯಿಂದ ಡಾ||ಶಿವಕುಮಾರ ಸ್ವಾಮಿಗಳ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ವಿವಿಧ ಮಠದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಮಾಲಾರ್ಪಣೆ ಮಾಡಿ, ನಂತರ ಪಕ್ಷಿಗಳಿಗೆ ಆಹಾರ, ನೀರುಣಿಸುವ ಎಪ್ರಿಲ್ ಕೂಲ್ ಕಾರ್ಯಕ್ರಮಕ್ಕೆ ಪರಿಸರ ಪ್ರೇಮಿ ಚೇತನಾ ಪಾಟೀಲ್ ಪಕ್ಷಿಗಳ ಅರವಟ್ಟಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ವಕೀಲರಾದ ಎಂ.ಅಮರೇಗೌಡ ಅವರು ಬಿರುಬೇಸಿಗೆಯ ಈ ದಿನಗಳಲ್ಲಿ ಪಕ್ಷಿಗಳಿಗೆ ನೀರುಣಿಸುವ ಮೂಲಕ ಮಾನವೀಯತೆ ಮೆರೆಯುವ ಕಾರ್ಯವನ್ನು ಹೊಗಳುತ್ತಾ ಪಕ್ಷಿಗಳ ಸಂತತಿ ಉಳಿವಿಗಾಗಿ ಅವುಗಳಿಗೂ ಅರವಟ್ಟಿಗೆ ನಿರ್ಮಿಸಿರುವ ವನಸಿರಿ ಫೌಂಡೇಶನ್ ಯುವಕರ ಕಾರ್ಯ ಶ್ಲಾಘನೀಯ ಎಂದರು
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಸದಸ್ಯರಾದ ಗಿರಿಸ್ವಾಮಿ ಹೆಡಗಿನಾಳ,ವಿಜಯ ಪಾಟೀಲ್,ಬುದೇಶ ಮರಾಠಿ, ಚಂದ್ರಶೇಖರ ತುರ್ವಿಹಾಳ, ಮಹಾಂತೇಶ ಉಪ್ಪಾರ, ಪ್ರದೀಪ್,ರಾಜು ಕುರುಕುಂದ,ಬದ್ರಿ ತಿಮ್ಮಾಪುರ,ದುರುಗೇಶ,ರಮೇಶ ಕುನ್ನಟಗಿ, ಸೇರಿದಂತೆ ಪರಿಸರ ಪ್ರೇಮಿಗಳು, ಪತ್ರಿಕ ಮಾಧ್ಯಮದವರು, ಸರ್ವ ರಾಜಕೀಯ ಮುಖಂಡರು, ಹಿರಿಯ ಗಣ್ಯ ವ್ಯಕ್ತಿಗಳು, ಕನ್ನಡಪರ ಸಂಘಟನೆಗಳು, ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಾಲಾ ಕಾಲೇಜುಗಳ ಶಿಕ್ಷಕರು ಉಪನ್ಯಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ: ಅವಿನಾಶ ದೇಶಪಾಂಡೆ