ಸಂಡೂರು ತಾಲ್ಲೂಕಿನ ರಾಜಾಪುರ ಗ್ರಾಮದ ಕುಮಾರಸ್ವಾಮಿ ಅವರು ದಿನಾಂಕ 27.06.2021 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಕುಟುಂಬವರ್ಗದವರು ತಿಳಿಸಿದ್ದಾರೆ.
ಸುಮಾರು ಇಪ್ಪತ್ತು ವರ್ಷಗಳಿಂದ ಸಂಡೂರು ತಾಲೂಕಿನಲ್ಲಿನ ಹಲವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ, ಬೊಮ್ಮಘಟ್ಟ, ಗೊಲ್ಲಲಿಂಗಮ್ಮನಹಳ್ಳಿ, ದೇವಗಿರಿ, ನರಸಾಪುರ, ಸೋವೇನಹಳ್ಳಿ, ದೊಡ್ಡಅಂತಪುರ, ಕೃಷ್ಣಾನಗರ ಹೀಗೆ ಪಂಚಾಯಿತಿಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ
ಕೆಲವೊಂದು ಗ್ರಾಮ ಪಂಚಾಯಿತಿಗಳಲಿ ಗೊಂದಲಗಳು ಕೆಲವು ರಾಜಕೀಯ ವ್ಯಕ್ತಿಗಳ ತಮ್ಮ ಸ್ವ ಪ್ರತಿಷ್ಟಿತಗೋಸ್ಕರ ಕೆಲಸಗಳಲ್ಲಿ ಕುಂಠಿತವಿದ್ದರೂ ಕೂಡ ಎಷ್ಟೇ ಸಮಸ್ಯೆ ಇದ್ದರೂ ಆದಷ್ಟು ತಾಳ್ಮೆಯಿಂದ ಬಗೆಹರಿಸಿ ಸೇವೆ ಸಲ್ಲಿಸಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡುತ್ತಿದ್ದರು
ಸುಮಾರು ದಿನಗಳ ಹಿಂದೆ ಅವರ ಸಹೋದರನಾದ ಬಂಡೆಪ್ಪನು ವಿಧಿವಶರಾಗಿರುತ್ತಾರೆ ಆ ನೋವಿನಲ್ಲೇ ಅವರ ಕುಟುಂಬ ಇನ್ನೂ ಇದೆ ಅವರ ಕುಟುಂಬದ ಸಂಪೂರ್ಣ ಜವಾಬ್ದಾರಿ ಇವರ ಮೇಲಿತ್ತು ಇವರನ್ನು ಕೂಡ ಭಗವಂತ ಬಿಡಲಿಲ್ಲ,ಮೃತರ ಆತ್ಮಕ್ಕೆ ದೇವರು ಶಾಂತಿ ನೆಮ್ಮದಿ ನೀಡಲಿ ಅವರ ಕುಟುಂಬದ ಸದಸ್ಯರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾಲೂಕಿನ ಸಹದ್ಯೋಗಿ ನೌಕರರು, ಅಧಿಕಾರಿಗಳು, ಆತ್ಮೀಯರು, ಹಿರಿಯರು, ಸ್ನೇಹಿತರು, ಕುಟುಂಬವರ್ಗದವರು ಸಂತಾಪ ವ್ಯಕ್ತಪಡಿಸಿದ್ದಾರೆ