ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ನೌಕರರ ಭವನಕ್ಕೆ ಶಾಸಕರಿಗೆ ಮನವಿ

0
452

ಸಂಡೂರು.ಜುಲೈ.16.ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ನಲ್ಲಿ ಡಿಎಂಎಫ್ ಹಾಗೂ ಸಿಎಸ್ಆರ್ ಅನುದಾನಗಳ ಅಡಿಯಲ್ಲಿ ಕಾಮಗಾರಿಗಳ ನಿರ್ವಹಣೆ ಕುರಿತ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಶಾಸಕರು ನೌಕರರ ಕಣ್ಮಣಿಗಳು ಆದ ಸನ್ಮಾನ್ಯ ತುಕಾರಾಮ್ ಆವರ ಉಪಸ್ಥಿತಿಯಲ್ಲಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಡಿಎಂಎಫ್ ಅಧಿಕಾರಿಗಳ ಸಮ್ಮುಖದಲ್ಲಿ ಸಂಡೂರು ತಾಲೂಕಿನ ಸರ್ಕಾರಿ ನೌಕರರ ಭವನದ ನಿರ್ಮಾಣದ ಕುರಿತು ಮನವಿಯನ್ನು ನೀಡಲಾಯಿತು

ಶಾಸಕರು ಈಗಾಗಲೇ ಸಿಎಸ್ಆರ್ ಅನುದಾನದಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಹಾಗೂ ಸಿಇಓ ರವರ ಸಮ್ಮುಖದಲ್ಲಿ ಹೇಳಿದಾಗ ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ಮಂಜೂರು ಮಾಡಲಾಗಿದೆ ಎಂದು ತಿಳಿಸಿರುತ್ತಾರೆ

ಶಾಸಕರು ಜಿಲ್ಲಾ ಪಂಚಾಯತ್ ಅಭಿಯಂತರರವರಿಗೆ ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ತಿಳಿಸಿರುತ್ತಾರೆ ಮಂಜೂರು ಮಾಡಿದ ಶಾಸಕರಿಗೂ ಹಾಗೂ ಜಿಲ್ಲಾಧಿಕಾರಿಗಳಿಗೂ ಜಿಲ್ಲಾ ಹಂತದ ಎಲ್ಲ ಅಧಿಕಾರಿಗಳಿಗೂ ಸಂಡೂರು ತಾಲೂಕಿನ ಸಮಸ್ತ ನೌಕರರ ಪರವಾಗಿ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ

ಈ ಕಾರ್ಯಕ್ರಮ ಅತಿ ತುರ್ತಾಗಿ ಇದ್ದುದರಿಂದ ನೌಕರರ ಸಂಘದ ಕಾರ್ಯದರ್ಶಿಗಳಾದ ಶ್ರೀಮತಿ ಉಲ್ಲೇಶಿ ಹಾಗೂ ಸಂಡೂರು ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾದ ಸುನಿಲ್ ಹಾಗೂ ನಾಮನಿರ್ದೇಶನ ಪದಾಧಿಕಾರಿಗಳಾದ ರಾಮಸ್ವಾಮಿ ಕೊಟ್ರೇಶ್ ಹಾಗೂ ಚಿಕ್ಕಪ್ಪ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ

LEAVE A REPLY

Please enter your comment!
Please enter your name here