ಮಂಡ್ಯ: ಜು.28:- ಇಂದು ಜಿಲ್ಲೆಯ ಪಾಂಡವಪುರ ಮತ್ತು ಕೆ.ಆರ್ ಪೇಟೆಯ ತಾಲ್ಲೂಕಿನ ಆಕ್ಸಿಜನ್ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಕ್ಸಿಜನ್ ಘಟಕ ಪ್ರದೇಶಕ್ಕೆ ಭೇಟಿ ನೀಡಿ ಮೂಲಭೂತ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಪಾಂಡವಪುರ ತಾಲ್ಲೂಕಿನ ಚಿನಕುರುಳಿಯ ಐಟಿಐ ಕಾಲೇಜು ಮತ್ತು ಕೆ.ಆರ್ ಪೇಟೆ ಟೌನ್ ನಲ್ಲಿರುವ ಐಟಿಐ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಪುಟ್ಟರಾಜು, ಪಾಂಡವಪುರ ತಹಶೀಲ್ದಾರರಾದ ಪ್ರಮೋದ್ ಪಾಟೀಲ್, ಕೆ.ಆರ್ ಪೇಟೆ ತಹಶೀಲ್ದಾರರಾದ ಶಿವಮೂರ್ತಿ ಹಾಗೂ ಮತ್ತಿತರರು ಇದ್ದರು.