ಸಂಡೂರು: ಫೆ: 17; ಜೀವನ್ ಸಂಗೀತ್ ಸಂಸ್ಥೆ(ರಿ)ಯು ವ್ಯಕ್ತಿ ವಿಕಸನ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದಿನಾಂಕ: 19.02.2024 ರಂದು ಬೆಳಿಗ್ಗೆ 10 ಗಂಟೆಗೆ ಗುರುಭವನದಲ್ಲಿ ನಡೆಯಲಿದೆ ಎಂದು ಸಂಸ್ಥಾಪಕರು ಹಾಗೂ ಅಧ್ಯಕ್ಷರಾಧ ಗೀತಾವಿರೇಶ್ ತಿಳಿಸಿದರು.
ಅವರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಸಂಸ್ಥೆಯ ಅವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಢಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿಗಳು ಹಾಗೂ ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗನ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು,
ಕಾರ್ಯಕ್ರಮವನ್ನು ಪ್ರೆಸಿಡೆಂಟ್ ಅಫ್ ಪ್ರಾಜೆಕ್ಟ್, ಜಿಂದಾಲ್ ರಾಜಶೇಖರ್ ಪಟ್ಟಣಶೆಟ್ಟಿ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಶಾಸಕ ಈ.ತುಕರಾಂ ವಹಿಸುವರು, ಮುಖ್ಯ ಅತಿಥಿಗಳಾಗಿ ಜಿಂದಾಲ್ ಹಾಗೂ ಸೇಲಂ ಘಟಕದ ಅಧ್ಯಕ್ಷರಾದ ಪಿ.ಕೆ. ಮುರುಗನ್, ಅತಿಥಿಗಳಾಗಿ ವಿ.ಪಿ ಜಿಂದಾಲ್ನ ಸುನಿಲ್ ರಾಲ್ಫ್, ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ ಎಸ್ ನಾನಾವಟೆ ಅಗಮಿಸುವರು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರಮುಖವಾಗಿ ಎಲ್ಲಾ ಸದಸ್ಯರು ಭಾಗವಹಿಸಿ ವ್ಯಕ್ತಿ ವಿಕಸನ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಜಿಲಾನಿ ಭಾಷಾ ನೃತ್ಯ ತಂಡ ಬಳ್ಳಾರಿ ಇವರು ನಡೆಸಿಕೊಡುವರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗಣ್ಯರಾದ ನೀತಾ ನಾವಲ್ ಉಪಾಧ್ಯಕ್ಷರು, ಜೀವನ್ ಸಂಗೀತ್ ಸೇವಾ ಸಂಸ್ಥೆಯ ಎಲ್ಲಾ ಸದಸ್ಯರು, ಉಪಸ್ಥಿತರಿರುವರು.