ಮಡಿಕೇರಿ ಸೆ.18 :-ಭಾರತ ಸ್ವಾತಂತ್ರೋತ್ಸವದ 75 ನೇ ಸಂಭ್ರಮಾಚರಣೆಯ ಅಂಗವಾಗಿ ಅಪ್ಪಂಗಳದ ಐಸಿಎಆರ್-ಐಐಎಸ್ಆರ್ ಪ್ರಾದೇಶಿಕ ಕೇಂದ್ರದಲ್ಲಿ ಇತ್ತೀಚೆಗೆ ಏಲಕ್ಕಿಯ ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಐಸಿಎಆರ್ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಐಸಿಎಆರ್-ಐಐಎಸ್ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ಏಲಕ್ಕಿಯ ವೈಜ್ಞಾನಿಕ ತಂತ್ರಜ್ಞಾನಗಳ ಬಗ್ಗೆ ನೆರೆದಿದ್ದ ರೈತರಿಗೆ ಮಾಹಿತಿ ನೀಡಿದರು.
ಎಂ.ಜಿ.ರಾಜೇಂದ್ರ ನಿರ್ದೆಶಕರು, ಯುರೋ ನ್ಯೂಟ್ರಿನಟ್ಸ್, ಚಿಕ್ಕಮಗಳೂರು ಇವರು ಕೃಷಿಯಲ್ಲಿ ಎನ್ಎಸ್ಪಿ 168 ನ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ರೈತರು ಕೇಂದ್ರದ ಪ್ರಾಯೋಗಿಕ ತಾಕುಗಳಿಗೆ ಭೇಟಿ ನೀಡಿದರು ಮತ್ತು ಕೇಂದ್ರದ ವಿಜ್ಞಾನಿಗಳು ರೈತರೊಂದಿಗೆ ಏಲಕ್ಕಿಯ ವಿವಿಧ ತಳಿಗಳು ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಸುಮಾರು 25 ಬೆಳೆಗಾರರು ಪಾಲ್ಗೊಂಡಿದ್ದರು.