ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾತ್ಮಾ ಗಾಂಧೀಜಿ ಪುತ್ತಳಿಗೆ ಮಾಲಾರ್ಪಣೆ.

0
87

ವಿಜಯನಗರ ಜಿಲ್ಲೆ (ಹೊಸಪೇಟೆ): ಇಂದು ಹೊಸಪೇಟೆ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿವತಿಯಿಂದ ಗಾಂಧೀಜಿ ಅವರ ಜಯಂತಿಯ ಅಂಗವಾಗಿ ನಗರದ ಗಾಂಧಿ ಚೌಕ್ ನ ಮಹಾತ್ಮಾ ಗಾಂಧೀಜಿ ಪುತ್ತಳಿಗೆ ಯುವ ಕಾಂಗ್ರೆಸ್ ಪಧಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಮಾಲಾರ್ಪಣೆ ಮಾಡಲಾಯಿತು.

ಕಾಂಗ್ರೆಸ್ ಮುಖಂಡರಾದ ದೀಪಕ್ ಸಿಂಗ್ ಮಾತನಾಡಿ ಇಂದು ಸ್ವಾತಂತ್ರ್ಯ ಹೋರಾಟಗಾರರು, ಅಹಿಂಸೆ ಮಾರ್ಗಗಳ ಶಾಂತಿಯುತ ಹೋರಾಟದಿಂದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟ ಮುಂಚೂಣಿರಲ್ಲಿದ್ದು ದೇಶಕ್ಕೆ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದ ಮಹಾತ್ಮಾ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಾಶಯ ಕೋರಿ ವಿಜಯನಗರ ಜಿಲ್ಲೆ ಆಗಿರುವುದು ಸಂತೋಷದ ವಿಷಯ ಜಿಲ್ಲೆ ಆಗಿರುವುದಕ್ಕೆ ಅಭಿನಂದನೆಗಳು 2004ರಲ್ಲಿ ಈ ಹೋರಾಟ ಪ್ರಾರಂಭವಾಯಿತು ಅದು ಈಗ ಜಿಲ್ಲೆ ಆಗಿದೆ. ಸ್ಥಳೀಯರಿಗೆ ಆದ್ಯತೆ ಕೊಡಿ ಕೂಲಿ ಕಾರ್ಮಿಕ ರಿಂದ ಎಲ್ಲಾ ವರ್ಗದ ಹಾಗೂ ರಾಜಕೀಯವಾಗಿ ಸ್ಥಳೀಯರಿಗೆ ಆದ್ಯತೆ ನೀಡಲಿ ಎಂದರು

ಕಾಂಗ್ರೆಸ್ ಮುಖಂಡ ಗುಜ್ಜಲ್ ನಾಗರಾಜ ಮಾತನಾಡಿ ಅಂದಿನ ಸ್ವಾತಂತ್ರ್ಯದ ಸಂಗ್ರಾಮಕ್ಕೆ ತ್ಯಾಗ ಬಲಿದಾನ ಮಾಡಿ ಹೋರಾಟ ಹಾದಿ ಹಾಕಿ ಅಹಿಂಸೆ ಮತ್ತು ಶಾಂತಿ ಮಾರ್ಗಗಳ ತೋರಿದ ಮಹಾತ್ಮಾ ಗಾಂಧೀಜಿಯವರಗೆ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಕೋರಿದರು ಮಹಾನ್ ನಾಯಕರ ಆದರ್ಶಗಳು ನಮ್ಮಲ್ಲಿ ಅಳವಡಿಕೆ ಯಾಗಲಿ ಎಂದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಭರತ್ ಕುಮಾರ್ ಸಿ ಆರ್ ಮಾತನಾಡಿ ಎಲ್ಲಾರಿಗೂ ಮಹಾತ್ಮಾ ಗಾಂಧೀಜಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯ ಶುಭಾಶಯಗಳು ತಿಳಿಸಿ ನೂತನ ವಿಜಯನಗರದ ಮೊದಲ ಬೇಡಿ ಯವಜನತೆ ಉದ್ಯೋಗ ವಂಚಿತರಾಗಿದ್ದಾರೆ ಜಿಲ್ಲೆಯ ಸ್ಥಳೀಯ ಕಾರ್ಖಾನೆಗಳಲ್ಲಿ ಯುವ ಜನತೆಗೆ ಉದ್ಯೋಗ ಕಲ್ಪಸಿ , ಪ್ರತಿ ನೂತನ ಸರ್ಕಾರಿ ಕಛೇರಿಗಳಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ದೊರಕುವಂತಾಗಲಿ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಪಧಾಧಿಕಾರಿಗಳಾದ ಅಬುಲ್ ಕಲಾಮ್ ಆಜಾದ್, ಉಪಾಧ್ಯಕ್ಷೇ ಆಯಿಶಾ ಬೇಗಂ, ಮೆಹಬೂಬ್ ಭಾಷ,ಅನಿತಾ,ರಾಘವೇಂದ್ರ,ಇನ್ನಿತರರು ಸೇರಿದಂತೆ ಕಾಂಗ್ರೆಸ್ ಪಕ್ಷದ ಮಖಂಡರಾದ ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೋಮಪ್ಪ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ವಿನಯ್ ಶೆಟ್ಟರ್, ಹೆಚ್ ಬಿ ಶ್ರೀನಿವಾಸ, ಮಂಜುನಾಥ,ರಾಘವೇಂದ್ರ, ಡ್ಯಾಂ ರಮೇಶ,ದಲ್ಲಾಳಿ ಕುಬೇರಾ, ದಸ್ತಗಿರಿ, ತಾಜುದ್ದೀನ್, ರಿಹಾನ್, ನಿಜಾಮುದ್ದೀನ್,ಕನ್ನೇಶ್ವರ,ನಭೀಸಾಬ್,ಓಬಳೇಶ ಸೇರಿದಂತೆ ಎಲ್ಲಾ ಮುಂಚೂಣಿ ಘಟಕಗಳ ಪಧಾಧಿಕಾರಿಗಳು , ಕಾರ್ಯಕರ್ತರು ಹಾಗೂ ಅಭಿಮಾನಿಗಳು ಇದ್ದರು.

LEAVE A REPLY

Please enter your comment!
Please enter your name here