ಸಂಡೂರು:ಅ:22:-ಸಂಡೂರು ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಹೆಚ್.ಎಲ್.ಸಿ ಕಾಲೋನಿಯ ಲಸಿಕಾ ಕೇಂದ್ರದಲ್ಲಿ ರಂಗೋಲಿ ಮೂಲಕ ನೂರು ಕೋಟಿ ಲಸಿಕೆ ನೀಡಿದ ಚಿತ್ರವನ್ನು ಬಿಡಿಸಿ 250 ಫಲಾನುಭವಿಗಳಿಗೆ ಲಸಿಕೆ ನೀಡಲಾಯಿತು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಲಸಿಕೆ ನೀಡಿದ ಆರೋಗ್ಯ ಸುರಕ್ಷತಾಧಿಕಾರಿಯವರಿಗೆ ಮತ್ತು ಜನರ ಮನವೋಲಿಸಿ ಹಾಗೆ ಡಾಟ ಎಂಟ್ರಿ ಮಾಡಲು ಸಹಕಾರ ನೀಡಿದ ಮತ್ತು ಸುಂದರವಾಗಿ ಬಣ್ಣದಿಂದ ನೂರು ಕೋಟಿ ಲಸಿಕೆ ಲೋಗೋ ಬಿಡಿಸಿದ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆಗಳನ್ನು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಶಕೀಲ್ ಅಹಮದ್, ಭಾಗ್ಯಲಕ್ಷ್ಮಿ,ಆಶಾ ಕಾರ್ಯಕರ್ತೆಯರಾದ ವೆಂಕಟಲಕ್ಷ್ಮಿ,ವಿಜಯಶಾಂತಿ,ಆಶಾ,ಶ್ರೀದೇವಿ,ಹುಲಿಗೆಮ್ಮ, ಪದ್ಮಾ, ಗೋವಿಂದಮ್ಮ ಇತರರು ಉಪಸ್ಥಿತರಿದ್ದರು