ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ

0
101

ಬಳ್ಳಾರಿ,ನ.22 : ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ನಗರದ ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸರ ಪ್ರತಿಮೆಗೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಅವರು ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನಕದಾಸರು ಜಾತಿ,ಮತ-ಭೇದ ಎನ್ನದೇ ತಮ್ಮ ಕೀರ್ತನೆಗಳ ಮುಖಾಂತರ ದೇಶ,ವಿದೇಶ ಸುತ್ತಿ ಜನರಿಗೆ ಮನವರಿಕೆ ಮಾಡುವುದರ ಮೂಲಕ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಟ್ಟವರಲ್ಲಿ ಅತ್ಯಂತ ಶ್ರೇಷ್ಠದಾಸರು ಕನಕದಾಸರಾಗಿದ್ದಾರೆ ಎಂದು ಅವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎ.ಈಶ್ವರಪ್ಪ, ಸಿ.ಸೋಮಶೇಖರ, ರಾಂಪುರ ಯರ್ರಿಸ್ವಾಮಿ, ಬಿ.ಗುರುಸಿದ್ದಪ್ಪ, ಎಚ್.ತಿಪ್ಪೇಸ್ವಾಮಿ, ರಾಮಣ್ಣ ಚೇಳಗುರ್ಕಿ, ಎಚ್.ಶಿವರಾಜ, ಎಚ್.ಟಿ.ವರದರಾಜ, ಡಿ.ಮೋಹನದಾಸ, ತಾಯಣ್ಣ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here