ಸಂಡೂರು:ಜ:28:ತಾಲೂಕಿನ ಡಿವೈಎಫ್ಐ, ಮತ್ತು ದಲಿತ ಯುವಜನರು ಹಾಗೂ ಸಿಪಿಐ(ಎಂ) ಪದಾಧಿಕಾರಿಗಳು ಸಂಯುಕ್ತವಾಗಿ ಉಪ ತಹಶಿಲ್ದಾರರು ನಾಡಕಛೇರಿ ತೋರಣಗಲ್ಲು ಇವರ ಮೂಲಕ ನ್ಯಾಯಧೀಶರು ಉಚ್ಚ ನ್ಯಾಯಾಲಯ ಸುಪ್ರಿಂಕೊರ್ಟ ನವದೆಹಲಿ ಇವರಿಗೆ ಮನವಿ ಪತ್ರ ಕಳುಹಿಸಲಾಯಿತು..
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಜಿಲ್ಲಾ ನ್ಯಾಯಾಧೀಶರೊಬ್ಬರಿಂದ ಅಪಮಾನವಾಗಿದ್ದು ರಾಯಚೂರು ಜಿಲ್ಲೆಯ ಜಿಲ್ಲಾ ನ್ಯಾಯಲಯದಲ್ಲಿ ದಿನಾಂಕ 26-06-2022 ರಂದು ನಡೆದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಸಂದರ್ಭದಲ್ಲಿ ಅಲ್ಲಿ ಮಹಾತ್ಮ ಗಾಂಧೀಜಿ ಚಿತ್ರಪಟದ ಜೊತೆ ಇಡಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಚಿತ್ರಪಟವನ್ನು ತೆಗೆದರೆ ಮಾತ್ರ ಧ್ವಜಾರೋಹಣ ಮಾಡುವೆನೆಂದು ಸಂವಿಧಾನ ಶಿಲ್ಪಿಗೆ ಮತ್ತು ಆ ಮೂಲಕ ಭಾರತದ ಸಂವಿಧಾನಕ್ಕೆ ಅಪಮಾನ ಎಸಗಿದ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಮಲ್ಲಿಕಾರ್ಜುನ ಗೌಡರ ಕ್ರಮವನ್ನು ಸಿಪಿಐ(ಎಂ)ಮತ್ತು ಡಿವೈಎಫ್ಐ ಬಲವಾಗಿ ಖಂಡಿಸುತ್ತದೆ ಎಂದರು…
ಅದೇ ರೀತಿ ಜಿಲ್ಲಾ ಉಪಾಧ್ಯಕ್ಷರಾದ ಸ್ವಾಮಿ.ಹೆಚ್ ರವರು ಮಾತನಾಡಿ
ಗಣರಾಜ್ಯೋತ್ಸವದ ದಿನವೇ ಸಂವಿಧಾನ ಶಿಲ್ಪಿಗೆ, ಅದು ಕೂಡಾ ನ್ಯಾಯಾಧೀಶರೊಬ್ಬರಿಂದ ಆಗಿರುವ ಅಪಮಾನವು ಅಕ್ಷಮ್ಯವಾಗಿದ್ದು ಈ ಕುರಿತು ಅಗತ್ಯ ಕ್ರಮವಹಿಸುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಈ ಮೂಲಕ ಒತ್ತಾಯಿಸುತ್ತೇವೆ ನ್ಯಾಯಾಲಯಗಳಲ್ಲಿ ಇಂತಹ ಜಾತೀವಾದಿ/ ಕೋಮುವಾದಿ ಮನಸ್ಸುಗಳು ತುಂಬಾ ಅಪಾಯಕರ ಎಂದು ಹೇಳಿದೆ. ರಾಜ್ಯದಾದ್ಯಂತ ಈ ಸಂವಿಧಾನ ವಿರೋಧಿ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗಿದ್ದು ಈ ಕೂಡಲೇ ಜಿಲ್ಲಾ ನ್ಯಾಯದೀಶರಾದ ಮಲ್ಲಿಕಾರ್ಜುನ ಗೌಡರ ಮತ್ತು ಸಂಬಂಧಪಟ್ಟವರಿಗೆ ಸೂಕ್ತ ಶಿಸ್ತುಕ್ರಮ ಜರುಗಿಸಿ ವಜಾಗೊಳಿಸಬೇಕೇಂದು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಸಿಐಐ(ಎಂ) ಕಾರ್ಯದರ್ಶಿ ಎ. ಸ್ವಾಮಿ, ಶಿವು ,ರಮೇಶ್,ರೇವಣ್ಣ, ವಿಜಯ, ಸಂಧ್ಯಾ, ಇತರರು ಭಾಗವಹಿಸಿದ್ದರು…