ಸಂಡೂರು ನಗರದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಶಿವಮೊಗ್ಗದ ಹರ್ಷ ಅವರ ಕೊಲೆಯನ್ನು ಖಂಡಿಸಿ, ದಿನಾಂಕ 22/2/22 ರ ಸಂಜೆ 7:30 ಕ್ಕೆ ಸಂಡೂರಿನ ವಿಜಯ್ ಸರ್ಕಲ್ ನಲ್ಲಿ ಶ್ರದ್ಧಾoಜಲಿಯನ್ನು ಮೌನ ಆಚರಣೆ ಮಾಡುವ ಮೂಲಕ ಸಲ್ಲಿಸಿದ್ದರು..
ಇದೇ ವೇಳೆ ನಿವೃತ್ತ NMDC ನೌಕರ ಬಂಡ್ರಿ ನಾಗರಾಜ್ ಮಾತನಾಡುತ್ತ.. ಹರ್ಷ ಕೊಲೆಯ ಹಿಂದೆ ಅನುಮಾನಗಳು ಮೂಡಿವೆ
![](https://haisandur.com/wp-content/uploads/2022/02/IMG-20220224-WA0046.jpg)
ಆಸ್ಪತ್ರೆಗೆ ದಾಖಲಿಸಿದರೂ ಉಳಿಯಲಿಲ್ಲ ಪ್ರಾಣ
ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಗಾಯಗೊಂಡು ಹರ್ಷ ನರಳುತ್ತಾ ಬಿದ್ದಿರುವ ವಿಚಾರ ಸ್ನೇಹಿತರು ಹಾಗೂ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅವರೆಲ್ಲ, ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದನ್ನು ವೈದ್ಯರು ದೃಢಪಡಿಸಿದ್ದಾರೆ.
ಹರ್ಷನನ್ನ ಹಿಂಬಾಲಿಸಿ ಬಂದಿದ್ದರಾ ಹಂತಕರು?
ಸ್ಥಳೀಯರು ಹೇಳುವಂತೆ ಹರ್ಷ ಹತ್ಯೆಯಾಗೋ ಸ್ವಲ್ಪ ಸಮಯದ ಹಿಂದೆ ಅವರ ಏರಿಯಾ ಸೀಗೆಹಟ್ಟಿಯಲ್ಲಿ ಕಾರೊಂದು ಬಂದಿತ್ತಂತೆ. ಬಳಿಕ ರಾತ್ರಿ ವೇಳೆಗೆಲ್ಲ ಹರ್ಷನನ್ನು ಅಟ್ಟಾಡಿಸಿ, ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ದುಷ್ಕರ್ಮಿಗಳು ಫಾಲೋ ಮಾಡುತ್ತಾ ಇದ್ದರು ಅಂತ ಸ್ಥಳೀಯರು ಹೇಳುತ್ತಾರೆ.
ಈ ಸಂದರ್ಭದಲ್ಲಿ RSS ಮತ್ತು ವಿಶ್ವ ಹಿಂದೂ ಪರಿಷತ್, ಯುವ ಬ್ರಿಗೇಡ್ ,ಹಿಂದೂ ಜಾಗರಣ ವೇದಿಕೆ ಕಾರ್ಯಕರತರಾದ ನಿವೃತ್ತ NMDC ನೌಕರ ಬಂಡ್ರಿ ನಾಗರಾಜ್, ಪ್ರಶಾಂತ್, ಔದಾಗರ ಭಟ್, ಮಲ್ಲಿಕಾರ್ಜುನ್ ಪೂಜಾರ್, ವಿಶ್ವ, ಕುಮಾರ್, ವಿನಯ್, ಬಸವರಾಜ್, ಪ್ರಶಾಂತ್ ಹಿರೇಮಠ್, ಸಂಜೀವ್, ನಾಗರಾಜ್, ಕಂತಿ, ಚೇತನ್, ಪಾಂಡು,ರಮೇಶ್, ನಿರಂಜನ, ಕಾರ್ಯಕರ್ತರು ಉಪಸ್ಥಿತರಿದ್ದರು..