ಹುಬ್ಬಳ್ಳಿ: ಮಾ.29: ನವನಗರದ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದಲ್ಲಿAದು ಜರುಗಿದ ಉದ್ಯೋಗ ಮೇಳದಲ್ಲಿ 56 ಕಂಪನಿಗಳು ಭಾಗವಹಿಸಿದ್ದವು. ಖಾಲಿ ಇರುವ 2156 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಉದ್ಯೋಗ ಮೇಳದಲ್ಲಿ ಆಯ್ಕೆ ಮಾಡಲಾಗುವುದು. ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ ಮೇಳ ಉದ್ಘಾಟಿಸಿ ಅಭ್ಯರ್ಥಿಗಳಿಗೆ ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಣ್ಣ ಟಿ, ಉದ್ಯೋಗ ಮತ್ತು ತರಬೇತಿ ಇಲಾಖೆಯ ಜಂಟಿ ನಿರ್ದೇಶಕ ಪಿ ರಮೇಶ್ಯ, ಐಟಿಐ ಕಾಲೇಜಿನ ಪ್ರಾಚಾರ್ಯರಾದ ನಾಗರತ್ನಾ ಕೋಟೂರ, ರವೀಂದ್ರ ದ್ಯಾಬೇರಿ, ರಾಯಾಪೂರದ ಜಿಟಿಟಿಸಿ ಪ್ರಾಚಾರ್ಯ ಕುಂಬಾರ, ನವಲಗುಂದದ ಐಟಿಐ ಕಾಲೇಜಿನ ಪ್ರಾಚಾರ್ಯ ಡಿ.ಜೆ. ಲಮಾಣಿ, ಸಹಾಯಕ ಸಾಂಖ್ಯಿಕ ಅಧಿಕಾರಿ ಎ.ಎಂ. ಶೆಟ್ಟರ, ಅಭಿಯಾನ ವ್ಯವಸ್ಥಾಪಕ ಡಾ. ರವಿ ಮುನವಳ್ಳಿ, ಜಿಲ್ಲಾ ಸಲಹೆಗಾರ ವಿಕ್ರಮ ವಾಲ್ಮೀಕಿ ಭಾಗವಹಿಸಿದ್ದರು.