ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿ ವನಸಿರಿ ಫೌಂಡೇಶನ್ ಸಹಯೋಗದೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿಯರು ಹಾಗೂ ಗರ್ಭಿಣಿ ಮಹಿಳೆಯರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಮದ ಹಲವೆಡೆ, ಅಂಗನವಾಡಿ ಕೇಂದ್ರ,ಗ್ರಾಮ ಪಂಚಾಯತ್, ದೇವಸ್ಥಾನ, ಶಾಲೆಯ ಆವರಣದಲ್ಲಿನ ಗಿಡಗಳಿಗೆ ಮಣ್ಣಿನ ಮಡಿಕೆ ಕಟ್ಟಿ ಮೂಕ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾಡಲಾಯಿತು.
ಈ ಸಂದರ್ಭದಲ್ಲಿ:ಶ್ರೀಮತಿ ಶಿವಗಂಗಾ, ಹಿರಿಯ ಮೆಲ್ವೀಚಾರಕಿ ಶ್ರೀಮತಿ ಪುಷ್ಪಾ ಗೋಂದಳಿ, ವಲಯ ಮೆಲ್ವೀಚಾರಕಿ ಶ್ರೀಮತಿ ರತ್ನಮ್ಮ, ಹಾಗೂ ಊರಿನ ಹಿರಿಯರು ಯುವಕರಿದ್ದರು.
ವರದಿ:ಅವಿನಾಶ ದೇಶಪಾಂಡೆ