ಹೊಸಪೇಟೆ(ವಿಜಯನಗರ),ಏ.16 : ಕನ್ನಡ ವಿಶ್ವ ವಿದ್ಯಾಲಯದ ಮಾನವಶಾಸ್ತ್ರ ವಿಭಾಗದಿಂದ ಸಂಶೋಧನಾ ವಿದ್ಯಾರ್ಥಿ ಮುಬೀನ.ಟಿ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಸಮಾಜ ವಿಜ್ಞಾನ ನಿಕಾಯದಲ್ಲಿ ಪ್ರಾಧ್ಯಾಪಕ ಡಾ.ತಾರಿಹಳ್ಳಿ ಹನುಮಂತಪ್ಪ ಮಾರ್ಗದರ್ಶನದಲ್ಲಿ “ಬಳ್ಳಾರಿ ಜಿಲ್ಲೆಯ ಮಹಿಳೆ ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆಯ
ಸಮಸ್ಯೆಗಳು: ಒಂದು ಅಧ್ಯಯನ” ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಟಿಪ್ಪುಸಾಬ್ ಮತ್ತು ಹೊನ್ನುರಮ್ಮ ದಂಪತಿಯ ಪುತ್ರಿ ಆಗಿದ್ದಾರೆ.
ಏ.12ರಂದು ನಡೆದ ಕನ್ನಡ ವಿಶ್ವ ವಿದ್ಯಾಲಯದ 30ನೇ ನುಡ್ಡಿಹಬ್ಬ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಕರ್ನಾಟಕದ ಗೌರನ್ವಿತ ರಾಜ್ಯಪಾಲರಾದ ಥವರ್ ಚಂದ್ ಗೆಹ್ಲೋಟ್ ಅವರು ಪಿಎಚ್ಡಿ ಪದವಿ ಪ್ರಧಾನ ಮಾಡಿದರು.