ವಿಜಯನಗರ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳ

0
93

ಹೊಸಪೇಟೆ(ವಿಜಯನಗರ),ಏ.21: ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆ ಮತ್ತು ಟಿ.ಎಂ.ಎ.ಇ.ಎಸ್ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ ಸಹಯೋಗದಲ್ಲಿ ಎಂ.ಎ.ಇ.ಎಸ್ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ರಾಷ್ಟ್ರೀಯ ಶಿಶಿಕ್ಷು ಮೇಳ ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.
ಹುಡಾ ಅಧ್ಯಕ್ಷರಾದ ಅಶೋಕ ಜೀರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತರಬೇತಿದಾರರು ಇಂತಹ ಮೇಳಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರ ಮೂಲಕ ಉದ್ಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹಮದ್ ಜಾಕೀರ ಹುಸೇನ್, ನಾಗಭೂಷಣ, ಹಂಪಸಾಗರ, ಪ್ರಕಾಶ ನಾಗರಾಜ, ರೇವಣಸಿದ್ದಪ್ಪ ಸೇರಿದಂತೆ ತರಬೇತಿದಾರರು ಇತರರು ಇದ್ದರು.
ರಾಷ್ಟ್ರೀಯ ಶಿಶುಕ್ಷು ಮೇಳದಲ್ಲಿ ಎಂ.ಎಸ್.ಪಿ.ಎಲ್ ಗ್ರೂಪ್ಸ್, ಟೋಯೋಟೊ ಕಿರ್ಲೋಸ್ಕರ್, ಬಿಎಂಎಂ ಸೇರಿದಂತೆ 19 ವಿವಿಧ ಕಂಪನಿಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ವಿವಿಧ ಸರ್ಕಾರಿ, ಅರೆ ಸರ್ಕಾರಿ ಮತ್ತು ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯ ಸುಮಾರು 250 ತರಬೇತಿದಾರರು ಭಾಗವಹಿಸಿ ಶಿಶಿಕ್ಷು ಮೇಳದ ಉದ್ದೇಶವನ್ನು ಸದುಪಯೊಗಪಡಿಸಿಕೊಂಡರು.

LEAVE A REPLY

Please enter your comment!
Please enter your name here